ಕಾರ್ಕಳ: ಭೀಕರ ಅಪಘಾತ ಪಿಯು ವಿದ್ಯಾರ್ಥಿಗಳಿಬ್ಬರ ಸಾವು

ಕಾರ್ಕಳ: ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಗದ್ದೆ ಬಳಿಯ ಚರಂಡಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತ ಪಟ್ಟ ಘಟನೆ ಇಂದು ಸಾಣೂರು ಬಳಿ ನಡೆದಿದೆ.ಅಪಘಾತದಲ್ಲಿ ಸುರತ್ಕಲ್ ನ ಇಬ್ಬರು ಪಿಯು ವಿದ್ಯಾರ್ಥಿಗಳಾದ ಸುದೇಶ್ ಹಾಗೂ ರಾಜೇಂದ್ರ ಮೃತಪಟ್ಟಿದ್ದಾರೆ.


5ಬೈಕ್ ನಲ್ಲಿ 10 ವಿದ್ಯಾರ್ಥಿಗಳು ಸುರತ್ಕಲ್‌ನಿಂದ ಕಾರ್ಕಳಕ್ಕೆ ಬರುತ್ತಿದ್ದಾಗ ಸಾಣೂರು ಶಾಂಭವಿ ಬ್ರಿಡ್ಜ್ ಬಳಿ ಹಾದು ಹೋಗುವ ಕಾರ್ಕಳ-ಬೆಳುವಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನವನ್ನು ಸವಾರ ಸುದೇಶ್ ಕಾರ್ಕಳ ಕಡೆಯಿಂದ ಬೆಳುವಾಯಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆಂದು ತಿಳಿದುಬಂದಿದೆ.


ರಸ್ತೆಯ ಬದಿಯಲ್ಲಿದ್ದ ತುಂಡಾದ ವಿದ್ಯುತ್ ಕಂಬದ ಬುಡಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸಮೇತ ಸವಾರ ಮತ್ತು ಸಹಸವಾರ ಡಾಮಾರು ರಸ್ತೆಯಿಂದ ಸುಮಾರು ೪೦ ಅಡಿ ಕೆಳಕ್ಕೆ ಚರಂಡಿಗೆ ಬಿದ್ದ ಪರಿಣಾಮ ತೀವೃ ಗಾಯಗೊಂಡ ದ್ವಿಚಕ್ರ ವಾಹನ ಸವಾರನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ಹಾಗೂ ಸಹಸವಾರ ರಾಜೇಂದ್ರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!