ಅಕ್ರಮ ಮರಳು ಸಾಗಾಟ ಪತ್ತೆ : ಐದು ಲಾರಿ ವಶ

ಬಂಟ್ವಾಳ: ಅಕ್ರಮ ಮರಳು ಸಾಗಾಟ ಲಾರಿಗಳನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತ್ರತ್ವದ ತಂಡ ವಶ ಪಡಿಸಿಕೊಂಡಿದೆ. ಈ ಸಂಬಂಧ ಮರಳು ತುಂಬಿದ ಐದು ಲಾರಿಗಳನ್ನು ಬಂಟ್ವಾಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ . ರಾತ್ರಿ ಗಸ್ತಿನಲ್ಲಿದ್ದ ತಹಶೀಲ್ದಾರ್ ಮತ್ತವರ ಸಿಬ್ಬಂದಿಗಳು ಶನಿವಾರ ನುಸುಕಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿದೆಡೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮರಳುತುಂಬಿದ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ವಯ ಕಾರ್ಯಾಚರಣೆಗೆ ಮುಂದಾದ ತಹಶೀಲ್ದಾರ್ ರಶ್ಮಿ ಅವರು, ಪಾಣೆಮಂಗಳೂರಿನ ನರಹರಿ ಬಳಿ ಎರಡು , ಮಾರ್ನಬೈಲ್ , ಚೇಲೂರು,ವಿಟ್ಲದ ಪಡಿಬಾಗಿಲು ಎಂಬಲ್ಲಿ ತಲಾ ಒಂದು ಲಾರಿಯನ್ನು ವಶಕ್ಕೆ ಪಡೆದು ಅಕ್ರಮ ಮರಳು ಸಾಗಾಟದ ಲಾರಿ ಚಾಲಕರಿಗೆ ಮುಂಜಾನೆಯೇ ಬಿಸಿಮುಟ್ಟಿಸಿದ್ದಾರೆ.
ವಶಕ್ಕೆ ಪಡೆದುಕೊಂಡ ಲಾರಿಗಳನ್ನು ಬಂಟ್ವಾಳ ನಗರ ಮತ್ತು ವಿಟ್ಲ ಪೋಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.
ಕಂದಾಯ ನಿರೀಕ್ಷಕ ನವೀನ್ ಹಾಗೂ ಇಲಾಖೆಯ ಸಿಬ್ಬಂದಿ ಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!