ಜೀವನದಲ್ಲಿ ಜಿಗುಪ್ಸೆ ಹೋಟೆಲ್ ಕಾರ್ಮಿಕ ಆತ್ಮಹತ್ಯೆ

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿದ್ಕಲ್ ಕಟ್ಟೆಯ ನಂದಿಕೇಶ್ವರ ಹೋಟೆಲ್ ನ ಕಾರ್ಮಿಕ ಉದಯ್ ದೇವಾಡಿಗ (40 ) ಜೀವನದಲ್ಲಿ ಜಿಗುಪ್ಸೆಗೊಂಡು ಹೋಟೆಲ್ ನ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಂದಾಪುರದ ಕಾವ್ರಾಡಿ ನಿವಾಸಿಗಿರುವ ಈತ ಅತಿಯಾದ ಕುಡಿತದ ಚಟ ಹೊಂದಿದ್ದ, ಈತನ ಶವ ದೊರೆತ ಸ್ಥಳದಲ್ಲಿ ಖಾಲಿಯಾದ ಮದ್ಯದ ಬಾಟಲಿ ಸಿಕ್ಕಿದ್ದು ತನ್ನ ಸಾವಿಗೆ ತಾನೇ ಕಾರಣ ಎಂಬ ಪತ್ರವನ್ನ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!