ಯುವಬ್ರಿಗೇಡ್ ಕುಂದಾಪುರ ಕಾರ್ಯಕರ್ತರಿಂದ ಪ್ರತಿ ಮನೆಗೂ ಪ್ರಥ್ವಿಯೋಗ

ಕುಂದಾಪುರ: ಮನೆಮನೆಗೂ “ಪ್ರಥ್ವಿಯೋಗ” ಯುವಬ್ರಿಗೇಡ್ ಕುಂದಾಪುರ ಈ ವರ್ಷದ ಮಳೆಗಾಲದಲ್ಲಿ ಮನೆಮನೆಗೆ ತೆರಳಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಆಧುನಿಕ ಕಾಲದಲ್ಲಿ ಮಾನವ ಅಭಿವೃದ್ಧಿಗಾಗಿ ಅತ್ಯಂತ ವೇಗವಾಗಿ ಅರಣ್ಯನಾಶ ಮಾಡಿ ಪ್ರಥ್ವಿಯ ಬದುಕನ್ನೇ ದುಸ್ತರಗೊಳಿಸಿದ್ದಾನೆ, ಈ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕಾಗಿದೆ.

ಆದ್ದರಿಂದ ಯುವಬ್ರಿಗೇಡ್ ಪ್ರಥ್ವಿಯೋಗದ ಕಲ್ಪನೆಯನ್ನು ಹೊತ್ತುತಂದು ಲಕ್ಷಾಂತರ ಸಸಿಗಳನ್ನು ರಾಜ್ಯಾದ್ಯಂತ ನೆಡುತ್ತಿದ್ದಾರೆ.

ಪ್ರಸ್ತುತ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಯುವಬ್ರಿಗೇಡ್‌ನ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ವಿನೂತನ ಸಂದೇಶದ ಜೊತೆಗೆ ಸಸಿಗಳನ್ನು ನೆಡುವುದರ ಮೂಲಕ ಸಮಾಜದಲ್ಲಿ ಉಸಿರಕ್ರಾಂತಿ ಮಾಡಹೊರಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!