ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶ್ರೀಶ ನಾಯಕ್ ಸಹೋದರ ನಿಧನ

ಉಡುಪಿ : ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶ್ರೀಶ ನಾಯಕ್ ಸಹೋದರ  ಶ್ರವಣ ಕುಮಾರ್ ಯಾನೆ ಶ್ರವಣ ನಾಯಕ್ (39) ಅಪಘಾತದಲ್ಲಿ ಗಾಯಗೊಂಡಿದ್ದ ಇವರು ಮೃತಪಟ್ಟಿದ್ದಾರೆ. 

ಕಳೆದ ಆಗಸ್ಟ್ 30ರಂದು  ಆಫ್ರಿಕಾದ ತಾಂಜಾನಿಯ ದೇಶದ ಬಾಬಟಿ ಎಂಬಲ್ಲಿ ಇವರ ಕಾರು ಮತ್ತು ಟ್ರಕ್  ಅಪಘಾತದಲ್ಲಿ ಶ್ರವಣ ಗಾಯಗೊಂಡಿದ್ದರು. ಒಂದು ವಾರ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆದ  ಇವರು  ಉಡುಪಿಗೆ ಬಂದಿದ್ದರು.

ಕಳೆದ ಶನಿವಾರ ವಿಪರೀತ ಸೊಂಟ  ನೋವು  ಕಾಣಿಸಿಕೊಂಡದ್ದರಿಂದ  ಚಿಕಿತ್ಸೆಗಾಗಿ ಉಡುಪಿಯ  ಹೈಟೆಕ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು .ಅಲ್ಲಿ ಚಿಕಿತ್ಸೆಗಾಗಿ ಪ್ರಜ್ಞೆ ತಪ್ಪಿಸಲು  ಚುಚ್ಚುಮದ್ದು ನೀಡಿದ್ದರು. ಒಂದು  ಚುಚ್ಚುಮದ್ದು  ನೀಡಿದಾಗ ದೇಹದಲ್ಲಿ ಪರಿಣಾಮ ಬೀರದಿದ್ದಾಗ  ಆಸ್ಪತ್ರೆಯ ವೈದ್ಯರು ಇನ್ನೊಂದು ಚುಚ್ಚುಮದ್ದು ನೀಡಿದ ಪರಿಣಾಮ ಅವರು ಮೃತಪಟ್ಟರು ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಮೃತ ಶ್ರವಣಕುಮಾರ್ ಕೇಬಲ್ ಲೈನ್ ನಿರ್ಮಿಸುವ ಉದ್ಯಮ ಸಂಸ್ಥೆಯ ಪಾಲುಗಾರರಾಗಿದ್ದರು.ಮ್ರತರು ತಾಯಿ, ಪತ್ನಿ ಮತ್ತು ಸಹೋದರರನ್ನುಅಗಲಿದ್ದಾರೆ. ಶ್ರವಣಕುಮಾರ್ ಮೃತಪಟ್ಟ ಬಗ್ಗೆ ಅವರ ಸಹೋದರ ಉಡುಪಿ ನಗರ ಠಾಣೆಗೆ 174 ಸಿಆರ್ಪಿಸಿ ಸೆಕ್ಷನ್ ಪ್ರಕಾರ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!