ನ್ಯಾಯ ಪಡೆಯುವಿಕೆ ವಿಳಂಬ ದೇಶದ ಜನರು ಎದುರಿಸುತ್ತಿರುವ ಮುಖ್ಯವಾದ ಸವಾಲುಗಳಲ್ಲಿ ಒಂದು- ಪ್ರಧಾನಿ ಮೋದಿ

ಕೆವಾಡಿಯಾ (ಗುಜರಾತ್) ಅ.15: ನ್ಯಾಯ ಪಡೆಯುವಿಕೆಯಲ್ಲಿ ವಿಳಂಬವಾಗುತ್ತಿರುವುದು ನಮ್ಮ ದೇಶದ ಜನರು ಎದುರಿಸುತ್ತಿರುವ ಮುಖ್ಯವಾದ ಸವಾಲುಗಳಲ್ಲಿ ಒಂದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇಲ್ಲಿನ ಏಕತಾ ನಗರದಲ್ಲಿ ನಡೆದ ಎರಡು ದಿನಗಳ `ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಾಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೊ ಸಂದೇಶದ ಮೂಲಕ ಮಾತನಾಡಿದ ಅವರು.  ಕಾನೂನನ್ನು ಸ್ಪಷ್ಟವಾಗಿ ಸರಳ ಹಾಗೂ ಪ್ರಾದೇಶಿಕ ಭಾಷೆಯಲ್ಲಿಯೇ ಬರೆಯಬೇಕು. ಆಗ ಅದು ಬಡವರಲ್ಲಿ ಬಡವರೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಹಾಗೂ ಸಾವಿರಾರು ವರ್ಷಗಳಿಂದ ಮುನ್ನಡೆಯುತ್ತ ಸಾಗಿರುವುದರ ಜೊತೆಜೊತೆಗೆ ಆಂತರಿಕ ಸುಧಾರಣೆಗಳನ್ನೂ ಕಂಡುಕೊಳ್ಳುತ್ತಾ ಬಂದಿರುವುದು ಭಾರತೀಯ ಸಮಾಜದ ವಿಶೇಷತೆಯಾಗಿದೆ. ನಮ್ಮ ಸಮಾಜವು ಪ್ರಸ್ತುತವಲ್ಲದ, ಕೆಟ್ಟ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಸ್ವಯಂ ಪ್ರೇರಿತವಾಗಿ ತೊಡೆದುಹಾಕುತ್ತಾ ಬಂದಿದೆ. ಒಂದೇ ರೀತಿಯ ಪದ್ಧತಿಗಳಿಗೆ ಅಂಟಿಕೊಂಡು ಕೂರುವುದರಿಂದ ಪ್ರಗತಿಗೆ ತೊಡಕಾಗುತ್ತದೆ ಎಂಬುದು ನಮಗೆ ತಿಳಿದಿದೆ’ ಎಂದೂ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!