ಕಟಪಾಡಿ ನಿವಾಸಿ ಮೈಸೂರಿನಲ್ಲಿ ನಿಧನ

ಉಡುಪಿ (ಉಡುಪಿ ಟೈಮ್ಸ್ ವರದಿ) : ಲಾಕ್ ಡೌನ್ ಸಂದರ್ಭದಲ್ಲಿ ಮೈಸೂರಿನ ತನ್ನ ಪತ್ನಿ ಮನೆಗೆ ತೆರಳಿದ್ದ ಕಟಪಾಡಿ ಮಣಿಪುರದ ನಿವಾಸಿ ಸ್ಟೀವನ್ ಮೊಂತೆರೊ (40) ಅಸೌಖ್ಯದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.


ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದ ಇವರು, ಕಳೆದ ಕೆಲವು ಸಮಯಗಳಿಂದ ಕಟಪಾಡಿ ಪರಿಸರದಲ್ಲಿ ಆಟೊ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಪತ್ನಿಯ ಸಹೋದರ ಅಸೌಖ್ಯದಲ್ಲಿ ಇದ್ದುದರಿಂದ, ಪತ್ನಿ ತನ್ನ ಮನೆಗೆ ಮೈಸೂರಿಗೆ ತೆರಳಿದ್ದರು. ಕೆಲವು ಸಮಯಗಳ ಹಿಂದೆ ಪತ್ನಿಯನ್ನು ಕರೆದು ಕೊಂಡು ಬರಲು ಮೈಸೂರಿಗೆ ತೆರಳಿದ್ದ ಸ್ಟೀವನ್, ಲಾಕ್ ಡೌನ್ ಪರಿಣಾಮ ಕಟಪಾಡಿಗೆ  ಬರಲು ಸಾದ್ಯವಾಗಿರಲಿಲ್ಲ. ಕಳೆದ ಎರಡು ದಿನಗಳಿಂದ ಶೀತಾ ಜ್ವರ ಕಾಣಿಸಿಕೊಂಡಿದ್ದರಿಂದ, ಸ್ಟೀವನ್ ರವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇಂದು ಉಸಿರಾಟದ ತೊಂದರೆಯಿಂದ ನಿಧನರಾಗಿರುವ ಮಾಹಿತಿ ದೊರಕಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ.  ಮಣಿಪುರದ ಜಾರ್ಜ್ ಮತ್ತು ಗ್ಲ್ಯಾಡಿಸ್ ದಂಪತಿಗಳ ಪುತ್ರನಾಗಿರುವ ಇವರು, ಪತ್ನಿ ನ್ಯಾನ್ಸಿ ಮರಿಯ, ಸಹೋದರಿಯರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!