ಮತಾಂತರ ಗೊಂಡಿರುವ ಅನ್ಯ ಧರ್ಮೀಯರನ್ನು ಸ್ವಧರ್ಮಕ್ಕೆ ಕರೆತರಬೇಕು ಹೇಳಿಕೆ ವಾಪಸ್ ಪಡೆದ ತೇಜಸ್ವಿ ಸೂರ್ಯ

ಬೆಂಗಳೂರು ಡಿ.27 : ಮತಾಂತರ ಗೊಂಡಿರುವ ಅನ್ಯಧರ್ಮೀಯರನ್ನು ಮರಳಿ ಹಿಂದೂಧರ್ಮಕ್ಕೆ ಕರೆತರಬೇಕು” ಎಂಬ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನಾನು `ಭಾರತದಲ್ಲಿ ಹಿಂದು ಪುನರುತ್ಥಾನ’ ವಿಚಾರದ ಕುರಿತು ಮಾತನಾಡಿದ್ದೆ. ನನ್ನ ಭಾಷಣದಲ್ಲಿನ ಕೆಲವೊಂದು ಹೇಳಿಕೆಗಳು ತಪ್ಪಿಸಬಹುದಾಗಿದ್ದ ವಿವಾದವನ್ನು ಹುಟ್ಟುಹಾಕಿವೆ. ಆದುದರಿದ ನಾನು ಆ ಹೇಳಿಕೆಗಳನ್ನು ಬೇಷರತ್ತಾಗಿ ವಾಪಸ್ ಪಡೆಯುತ್ತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದುವನ್ನು ತನ್ನ ಮಾತೃ ಧರ್ಮದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ. ಇದಕ್ಕೆ ಒಂದು ಸಾಧ್ಯ ಪರಿಹಾರವಿದೆ, ತಮ್ಮ ಮಾತೃ ಧರ್ಮವನ್ನು ತೊರೆದವರು ಹಾಗೂ ಇತಿಹಾಸದುದ್ದಕ್ಕೂ ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿ ಹಿಂದು ಧರ್ಮ ತ್ಯಜಿಸಿದವರೆಲ್ಲರನ್ನೂ ಮತ್ತೆ ವಾಪಸ್ ಅವರ ಮಾತೃ ಧರ್ಮಕ್ಕೆ ಕರೆತರಬೇಕಿದೆ,” ಎಂದು ಅವರು ಹೇಳಿದ್ದರು. ತೇಜಸ್ವಿ ಸೂರ್ಯ ಅವರ ಈ ಭಾಷಣದ ವೀಡಿಯೋಗಳು ವೈರಲ್ ಆಗಿದ್ದು ಸಾಕಷ್ಟು ವಿವಾದಕ್ಕೀಡಾಗಿದ್ದವು.

Leave a Reply

Your email address will not be published. Required fields are marked *

error: Content is protected !!