ಕುಂದಾಪುರ:ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಮೃತ

ಕುಂದಾಪುರ ಅ.29 (ಉಡುಪಿ ಟೈಮ್ಸ್ ವರದಿ) : ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರದ ವಡೇರ ಹೋಬಳಿ ಗ್ರಾಮದಲ್ಲಿ ನಡೆದಿದೆ.

ನಾರಾಯಣ (66) ಮೃತಪಟ್ಟವರು. ಇವರು ಅ.28 ರಂದು ಬೆಳಿಗ್ಗೆ ತೋಟಕ್ಕೆ ತೆಂಗಿನ ಕಾಯಿ ಹೆಕ್ಕಲು ಹೋಗಿದ್ದರು. ಇವರು ವಾಪಾಸ್ಸು ಮನೆಗೆ ಬಾರದೆ ಇದ್ದಾಗ ಮನೆಯವರೆಲ್ಲಾ ಇವರನ್ನು ಹುಡುಕಿದಾಗ ನಾರಾಯಣ ಅವರು ತೋಟದ ಪಕ್ಕದ ಕೆರೆಯಲ್ಲಿ ತೇಲಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅವರನ್ನು ಕೆರೆಯಿಂದ ಮೇಲಕೆತ್ತಿ ನೋಡಿದಾಗ ನಾರಾಯಣ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಅದರಂತೆ ನಾರಾಯಣ ಅವರು ತೆಂಗಿನಕಾಯಿ ಹೆಕ್ಕಲು ತೋಟಕ್ಕೆ ಹೋದವರು ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಮೃತರ ಮಗ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!