ಸಂಕಷ್ಟಕ್ಕೆ ಒಳಗಾದ ಆದಿವಾಸಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಕೊರೋನಾ ಲಾಕ್ ಡೌನ್ ನಿಂದಾಗಿ ಆಲೂರು ಸುತ್ತಮುತ್ತಲಿನ ಆದಿವಾಸಿ ಸಮುದಾಯಗಳು ಕೂಲಿ ಹಾಗೂ ಕುಲಕಸುಬು ಮಾಡಿ ಜೀವನ ನಡೆಸುತ್ತಿರುವ ಜನರು ಸಂಕಷ್ಟಕ್ಕೆ ಒಳಗಾಗಿದ್ದು. ಇವರಿಗೆ ಸಮುದಾಯ ಕುಂದಾಪುರ ಸೇರಿದಂತೆ ಹಲವಾರು ದಾನಿಗಳ ನೆರವಿನಿಂದ 4 ಆದಿವಾಸಿಗಳ ಗುಂಪಿಗೆ ಆಹಾರದ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಡಿ ವೈ ಎಫ್ ಐ ಮುಖಂಡರಾದ ರಾಜೇಶ್ ವಡೇರಹೋಬಳಿ, ಕೃಷಿ ಕೂಲಿಕಾರರ ಸಂಘದ ಮಖಂಡರಾದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗರತ್ನ ನಾಡ ಮತ್ತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕರಾದ ಶ್ರೀಧರ್ ನಾಡ ಮತ್ತು ಗಣೇಶ ಆಲೂರು ಇವರ ಉಪಸ್ಥಿತರಿದ್ದರು. ಅಲ್ಲದೆ ಇದೆ ಸಂದರ್ಭದಲ್ಲಿ ಕೋವಿಡ್ ನ್ನು ಎದುರಿಸುವ ಕುರಿತು ಮತ್ತು ಅಗತ್ಯವಾಗಿ ಎಲ್ಲರೂ ಲಸಿಕೆ ಪಡೆಯಲು ಜಾಗೃತಿ ಮೂಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!