ಹಿರಿಯಡ್ಕ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ
![](https://udupitimes.com/wp-content/uploads/2024/03/IMG-20240318-WA0069-1024x576.jpg)
ಹಿರಿಯಡ್ಕ ಮಾ.18(ಉಡುಪಿ ಟೈಮ್ಸ್ ವರದಿ): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಬಲಿದಾನ ದಿವಸ್ ಅಂಗವಾಗಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಕೂಟ ಬಲಿದಾನ ಟ್ರೋಫಿ-2024 ಹಿರಿಯಡ್ಕ ಕೊಟ್ನಕಟ್ಟೆ ಫ್ರೆಂಡ್ಸ್ ಮೈದಾನ ಸಂಪನ್ನಗೊಂಡಿತು.
![](https://udupitimes.com/wp-content/uploads/2024/03/IMG-20240318-WA0034-1024x768.jpg)
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಹೆಚ್.ಕೆ ಅವರು, ವಿದ್ಯಾರ್ಥಿ ಪರಿಷತ್ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಸಂಘಟನೆಯಾಗಿದ್ದು ಎಲ್ಲಾ ಕ್ಷೇತ್ರದಲ್ಲೂ ತನ್ನ ಇರುವಿಕೆಯನ್ನು ಗುರುತಿಸಿದೆ ಎಂದರು ಮತ್ತು ಈ ಬಲಿದಾನ ಟ್ರೋಫಿ ನಮ್ಮೆಲ್ಲರಿಗೂ ರಾಷ್ಟ್ರ ಪುನರ್ನಿರ್ಮಾಣದ ಕೈಂಕರ್ಯವನ್ನು ನೆನಪಿಸುವಂತದ್ದು ಎಂದರು.
ಈ ವೇಳೆ ಸತ್ಯಾನಂದ ನಾಯಕ್ ಮಾತನಾಡಿ ಮುಂದೆ ಬರುವಂತ ದಿನಗಳಲ್ಲಿ ಹಿರಿಯಡ್ಕ ಪರಿಸರದಲ್ಲಿ ಎಬಿವಿಪಿ ಕಾರ್ಯಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ಸಮಾರೋಪದಲ್ಲಿ ಭಾಗವಹಿಸಿದ ಹಿರಿಯಡ್ಕದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪೂರ್ಣಿಮಾ ಸುರೇಶ್ ನಾಯಕ್ ಮಾತನಾಡಿ ವಿಜೇತ ತಂಡಗಳಿಗೆ ಶುಭ ಹಾರೈಸಿದರು.
ಕ್ರೀಡಾ ಕೂಟದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕದ ಕಾಲೇಜು ಅಭಿವೃದ್ಧಿ ಸಮಿತಿಯ ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಾದ ಸದಾನಂದ ನಾಯಕ್ ಆತ್ರಾಡಿ, ಹಾಗೂ ಕೊಡ್ನಕಟ್ಟೆ ಫ್ರೆಂಡ್ಸ್ ಅಧ್ಯಕ್ಷರಾದ ಸತ್ಯಪ್ರಸಾದ್ ಆಚಾರ್ಯ, ರಾಜ್ಯ ಸಹಕಾರ್ಯದರ್ಶಿ ಹರ್ಷಿತ್ ಕೊಯ್ಲಾ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಕೆ, ತಾಲೂಕು ಸಂಚಾಲಕ ಅಜಿತ್ ಜೋಗಿ, ರಾಜ್ಯ ಕಾನೂನು ಸಮಿತಿ ಸದಸ್ಯ ಕಿಶೋರ್ ಕುಮಾರ್, ನಗರ ಕಾರ್ಯದರ್ಶಿ ಶ್ರೀವತ್ಸ, ಸಹ ಕಾರ್ಯದರ್ಶಿ ಭಾವನಾ ಮತ್ತು ಕಾರ್ತಿಕ್, ನಗರ ಖೇಲೋ ಭಾರತ್ ಪ್ರಮುಖ ಸ್ವಸ್ತಿಕ್ ಪೂಜಾರಿ ಮತ್ತು ಪ್ರಮುಖರಾದ ಲ್ಯಾರಿ, ಶಿಶಿರ್, ರವಿಚಂದ್ರ ಉಪಸ್ಥಿತರಿದ್ದರು.