ಉಡುಪಿ ಸುಮನಸಾ ಕೊಡವೂರು: ಫೆ.25- ಮಾ.2 ನಾಟಕೋತ್ಸವ “ರಂಗಹಬ್ಬ-12”

ಉಡುಪಿ ಫೆ.24(ಉಡುಪಿ ಟೈಮ್ಸ್) : ಸುಮನಸಾ ಕೊಡವೂರು ಇದರ ವತಿಯಿಂದ ನಡೆಯುವ “ರಂಗಹಬ್ಬ-12” ನಾಟಕೋತ್ಸವವು ಈ ಭಾರಿ ಫೆ. 25 ರಿಂದ ಮಾರ್ಚ್ 2 ವರೆಗೆ ಸಂಜೆ 6.30ಕ್ಕೆ ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಸುಮನಸಾದ ಗೌರವಾಧ್ಯಕ್ಷ ಎಮ್.ಎಸ್.ಭಟ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರಸಭೆ ಉಡುಪಿ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಇದರ ಸಹಯೋಗದೊಂದಿಗೆ ನಾಟಕೋತ್ಸವ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗ ನಿರ್ದೇಶಕ ಹೆಚ್. ಜರ್ನಾದನ್ (ಜಿನ್ನಿ) ಅವರು ನೆರವೇರಿಸಲಿದ್ದಾರೆ. ಶಾಸಕ ಯಶ್‌ಪಾಲ್ ಸುವರ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.

ಹಾಗೂ ಕಾರ್ಯಕ್ರಮದಲ್ಲಿ ಪ್ರತಿದಿನ ರಂಗಸಾಧಕರಿಗೆ ಸನ್ಮಾನ ನಡೆಯಲಿದ್ದು, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ನೀಡಲಾಗುತ್ತದೆ. ಇದರ ಜೊತೆಗೆ ಯಕ್ಷಗಾನ ಉನ್ನತಿಗೆ ಸದಾ ಶ್ರದ್ಧಾ ಬದ್ಧರಾಗಿ, ಸೃಜನಶೀಲತೆಯ ಪ್ರತೀಕವಾಗಿದ್ದ ಯು. ದುಗ್ಗಪ್ಪ ರವರ ನೆನಪಿನಲ್ಲಿ “ಯಕ್ಷಸುಮ” ಪ್ರಶಸ್ತಿಯನ್ನು ಯಕ್ಷಗಾನ ಛಂದಸ್ಸುಗಾರ ಗಣೇಶ್ ಕೊಲೆಕಾಡಿ ಅವರಿಗೆ ಕೊಡ ಮಾಡಲಾಗುವುದು ಹಾಗೂ ಪ್ರತಿದಿನ ರಂಗ ಸಾಧಕರೊಬ್ಬರನ್ನು ಸನ್ಮಾನಿಸುವುದು ಎಂದು ಮಾಹಿತಿ ನೀಡಿದರು.

ರಂಗ ಹಬ್ಬದಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು:

ಫೆಬ್ರವರಿ 25 : ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು – ಕನ್ನಡ ನಾಟಕ “ಸರಸ ವಿರಸ ಸಮರಸ

ಫೆಬ್ರವರಿ 26 : ರಂಗ ಆರಾಧನಾ, ಸವದತ್ತಿ – ಕನ್ನಡ ನಾಟಕ “ದೇವಸೂರ

ಫೆಬ್ರವರಿ 27 : ನಗ್ನ ಥೇಟರ್, ಉಡುಪಿ ಕನ್ನಡ ನಾಟಕ “”ಅಗ್ನಿ ಮತ್ತು ಮಳೆ

ಫೆಬ್ರವರಿ 28 : ಸುಮನಸಾ ಕೊಡವೂರು, ಉಡುಪಿ – ಕನ್ನಡ ಯಕ್ಷನಾಟಕ “ಸಮುದ್ರೋಲ್ಲಂಘನೆ

ಫೆಬ್ರವರಿ 29 : ನಮ ತುಳುವೆರ್, ಮುದ್ರಾಡಿ -ಕನ್ನಡ ನಾಟಕ “ಅಂಬೆ

ಮಾರ್ಚ್ 01 : ಸಮುದಾಯ ಬೆಂಗಳೂರು – ಕನ್ನಡ ನಾಟಕ “ಕರಿಯ ದೇವರ ಹುಡುಕಿ

ಮಾರ್ಚ್ 02 : ಸುಮನಸಾ ಕೊಡವೂರು, ಉಡುಪಿ -ತುಳು ನಾಟಕ “ಶಿಕಾರಿ

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಗೌರವಾಧ್ಯಕ್ಷ- ಎಮ್.ಎಸ್.ಭಟ್, ಸಂಚಾಲಕ ಭಾಸ್ಕರ್ ಪಾಲನ್, ಅಧ್ಯಕ್ಷ – ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯ್ ಕುಮಾರ್, ಯೋಗೀಶ್ ಕೊಳಲಗಿರಿ, ಪ್ರಧಾನ ಕಾರ್ಯದರ್ಶಿ – ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!