ಪಡುಬಿದ್ರೆ: ವ್ಯಕ್ತಿ ಆತ್ಮಹತ್ಯೆ

ಪಡುಬಿದ್ರಿ ಫೆ.19(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಪುವಿನ ನಂದಿಕೂರು ಗ್ರಾಮದ ಶೆಟ್ಟಿ ಗುಡ್ಡೆಯಲ್ಲಿ ನಡೆದಿದೆ.

ನಿವಾಸಿ ಶೇಖರ (67) ಆತ್ಮಹತ್ಯೆ ಮಾಡಿಕೊಂಡಿರುವವರು. ಇವರು ಇಂದು ಬೆಳಿಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ನಂದಿಕೂರು ಗ್ರಾಮದ ಶೆಟ್ಟಿ ಗುಡ್ಡೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಮಗ ನೀಡಿದ ಮಾಹಿತಿಯಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!