ಬ್ರಹ್ಮಾವರ: ಮೊಬೈಲ್ ಟವರ್ ಗೆ ಅಳವಡಿಸಿದ್ದ 5ಜಿ ಬಿಬಿಯು ಕಾರ್ಡ್ ಕಳವು

ಬ್ರಹ್ಮಾವರ ಫೆ.13(ಉಡುಪಿ ಟೈಮ್ಸ್ ವರದಿ): ಮೊಬೈಲ್ ಟವರ್ ಗೆ ಅಳವಡಿಸಿದ್ದ 5ಜಿ ಬಿಬಿಯು ಕಾರ್ಡ್‍ನ್ನು ಕಳ್ಳರು ಕದ್ದು ಕೊಂಡು ಹೋಗಿರುವ ಘಟನೆ ಬ್ರಹ್ಮಾವರದ ಯಡ್ತಾಡಿ ಗ್ರಾಮದಲ್ಲಿ ನಡೆದಿದೆ.

ಮಂಗಳೂರಿನ ಕಾವೂರಿನ ಪೆರಿಗ್ರಿ ಸೆಕ್ಯೂರಿಟಿ ಸಂಸ್ಥೆಯ ಸೂಪರ್ ವೈಸರ್ ಆಗಿರುವ ದಿನೇಶ್ ಕೆ. ಅವರು ಈ ಬಗ್ಗೆ ದೂರು ನೀದಿದ್ದಾರೆ. ಪೆರಿಗ್ರಿ ಸೆಕ್ಯೂರಿಟಿ ಸಂಸ್ಥೆಗೆ ಸಂಬಂಧಿಸಿದ ಬ್ರಹ್ಮಾವರದ ಯಡ್ತಾಡಿ ಗ್ರಾಮದ ಯಡ್ತಾಡಿ ಎಂಬಲ್ಲಿರುವ ಇಂಡಸ್ ಟವರ್ ಕಂಪೆನಿಯ ಟೆಲಿಕಮ್ಯೂನಿಕೆಷನ್ ಮೊಬೈಲ್ ಟವರ್ ಗೆ ಅಳವಡಿಸಿದ್ದ 5ಜಿ ಬಿಬಿಯು ಕಾರ್ಡ್‍ನ್ನು ಫೆ.9 ರಂದು ಮಧ್ಯಾಹ್ನದ ವೇಳೆ ಕಳ್ಳರು ಟವರ್ ನಿಂದ ಬಿಚ್ಚಿ ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!