ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಎನ್.ಆರ್.ಐ ಉದ್ಯಮಿ
![](https://udupitimes.com/wp-content/uploads/2024/02/WhatsApp-Image-2024-02-06-at-6.05.20-PM-1024x549.jpeg)
ಉಡುಪಿ ಫೆ.06(ಉಡುಪಿ ಟೈಮ್ಸ್ ವರದಿ): ಬುಡ್ನಾರು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವಕ ಶೇಖ್ ವಹಿದ್ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
![](https://udupitimes.com/wp-content/uploads/2024/02/budnar3.jpg)
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕ ಶೇಖ್ ವಹಿದ್ ಅವರು, ತಾವು ಕಲಿತಂತಹ ಶಾಲೆ ಮುಂದೆ ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮುಂದಿನ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಯೇ ಶಿಕ್ಷಣ ಪಡೆಯುವಂತಹ ಮಾದರಿ ಶಾಲೆ ಇದಾಗಬೇಕು ಇದಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
![](https://udupitimes.com/wp-content/uploads/2024/02/budnar2.jpg)
ಈ ವೇಳೆ ಮಾಜಿ ನಗರ ಸಭಾ ಅಧ್ಯಕ್ಷ ಕುಶಾಲ್ ಶೆಟ್ಟಿ ಅವರು ಮಾತನಾಡಿ, ಶಾಲೆ ನಮ್ಮ ಜ್ಞಾನವನ್ನು ವೃದ್ಧಿಸುವ ಪುಣ್ಯ ಸ್ಥಳ ಎಂದರು ಹಾಗೂ ಶೇಖ್ ವಹೀದ್ ಅವರ ಶಾಲೆಗೆ ಪ್ರತೀ ವರ್ಷ 10,000 ಸಹಾಯಧನ ನೀಡುವ ಭರವಸೆಯನ್ನು ಶ್ಲಾಘಿಸಿದರು.
![](https://udupitimes.com/wp-content/uploads/2024/02/budnar-1.jpg)
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ವತಿಯಿಂದ ಸಮಾಜ ಸೇವಕ ಶೇಖ್ ವಹಿದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬುಡ್ನಾರು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ದಿವಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಡಿ ಶೆಟ್ಟಿ, ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.