ಲೇಖಕ ಮೌನೇಶ್ ಬಡಿಗೇರರ “ಟಪಾಲು ಮನೆ” ಕೃತಿ ಬಿಡುಗಡೆ

ಉಡುಪಿ ಜ.30 (ಉಡುಪಿ ಟೈಮ್ಸ್ ವರದಿ): ರಂಗಭೂಮಿ ಉಡುಪಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಲೇಖಕ ಮೌನೇಶ್ ಬಡಿಗೇರ ಅವರ `ಟಪಾಲು ಮನೆ ‘ನಾಟಕ ಕೃತಿಯ ಬಿಡುಗಡೆ ಮಾಡಲಾಯಿತು. ಕೃತಿಯನ್ನು ಯಕ್ಷಗಾನ ಕೇಂದ್ರ ಉಡುಪಿ ಇದರ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ನಾಟಕದ ರಂಗ ಪ್ರಯೋಗವನ್ನು ಮಾಡಲು ರಂಗಭೂಮಿ ಚಿಂತನೆ ನಡೆಸಬೇಕು. ಇಂತಹ ಅತ್ಯುತ್ತಮ ರ್ಯಕ್ರಮಗಳನ್ನು ಸಂಘಟಿಸುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಂಡ ರಂಗಭೂಮಿಯ ನೈಜ ಆಶಯವನ್ನು ಸಹಕಾರಗೊಳಿಸುತ್ತಿದೆ ಎಂದರು. ಹಾಗೂ ಇದೇ ವೇಳೆ ಅವರು, ಅಗಲಿದ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ರಂಗಭೂಮಿಗೆ ನೀಡಿದ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸಿ ಮಾಹಿತಿ ನೀಡಿದರು.

ಈ ಕಾರ್ಯಕ್ರಮದ ಪೂರ್ವದಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣ ಪುಸ್ತಕ ಪ್ರಶಸ್ತಿ ವಿಜೇತ ಕೃತಿ ಮೌನೇಶ್ ಬಡಿಗೇರ ಅವರ ‘ ಅಭಿನಯ ಕಲಿಸಲು ಸಾಧ್ಯವೇ ?’ ಎಂಬ ಬಗ್ಗೆ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಚಿಂತಕ ಭುವನಪ್ರಸಾದ ಹೆಗ್ಡೆ, ಕೃತಿಕಾರ ಮೌನೇಶ್ ಬಡಿಗೇರ, ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್.ಆರ್.ಬಲ್ಲಾಳ್, ಮಾಹೆ ಮಣಿಪಾಲ ಯೂನಿವರ್ಸಲ್ ಪ್ರೆಸ್ ನ ಅರವಿಂದ್, ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಪೂರ್ಣಿಮಾ ಸುರೇಶ್, ವಿವೇಕಾನಂದ ಎಸ್, ಹಿರಿಯ ರಂಗ ನಿರ್ದೇಶಕರುಗಳಾದ ಕೃಷ್ಣಮೂರ್ತಿ ಕವತಾರ್ ಹಾಗೂ ಬಾಸುಮ ಕೊಡಗು, ಪ್ರಶಸ್ತಿ ಸಮಿತಿಯ ಸಹ ಸಂಚಾಲಕರಾದ ಪ್ರಭಾಕರ್ ಜಿ.ಪಿ ., ಡಾ. ನಿಕೇತನಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!