ಮಣಿಪಾಲ: ವಿಪರೀತ ಮಳೆ- ಟೆರೆಸ್‌ನಿಂದ ಬಿದ್ದು ವ್ಯಕ್ತಿ ಮೃತ್ಯು

ಮಣಿಪಾಲ ಜು.27(ಉಡುಪಿ ಟೈಮ್ಸ್ ವರದಿ):   ಟೆರೆಸ್‌ಗೆ ಹೋಗುತ್ತಿದ್ದ ವ್ಯಕ್ತಿ ವಿಪರೀತ ಮಳೆ ಕಾರಣ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ಲಾಡ್ಜ್ ವೊಂದರಲ್ಲಿ ನಡೆದಿದೆ.

ಸಾಧು ಎಂ ದೇವಾಡಿಗ (65) ಮೃತಪಟ್ಟವರು. ಮಣಿಪಾಲದ ಹೊಟೇಲ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರು  ಜು.22 ರಂದು ರಾತ್ರಿ 10:30ಕ್ಕೆ ಕೆಲಸ ಮುಗಿಸಿ ವಿಶ್ರಾಂತಿಗೆಂದು ಲಾಡ್ಜ್‌‌ಗೆ ಬಂದು ಅಲ್ಲಿಂದ ಬಟ್ಟೆ ತೆಗೆದುಕೊಂಡು ಟ್ಯಾರೆಸ್‌ಗೆ ಹೋಗುವಾಗ ವಿಪರೀತ ಮಳೆಯ ಕಾರಣದಿಂದ ಕಾಲು ಜಾರಿ ನೆಲಕ್ಕೆ ಬಿದ್ದು, ತಲೆಗೆ ಪೆಟ್ಟಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂಬುದಾಗಿ ದೇವದಾಸ ಎಂಬವರು ನೀಡಿದ ಮಾಹಿತಿಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!