ಉಡುಪಿ: ಜಾಗ ಮಾರಾಟದ ನೆಪದಲ್ಲಿ ವ್ಯಕ್ತಿಗೆ 13 ಲ.ರೂ. ವಂಚನೆ
ಉಡುಪಿ ಜು.27(ಉಡುಪಿ ಟೈಮ್ಸ್ ವರದಿ): ಜಾಗ ಹಾಗೂ ಮನೆಯನ್ನು ಮಾರಾಟ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ಜಾಗ ನೀಡದೆ ವಂಚಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸುಭಾಸ್ ನಗರ ನಿವಾಸಿ ಸತ್ಯನಾರಾಯಣ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಸತ್ಯನಾರಾಯಣ ಶೆಟ್ಟಿ ಅವರು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಗುಂಡಿಬೈಲುವಿನಲ್ಲಿ ಸರ್ವೇ ನಂಬ್ರ 141/31ಎ3 ರಲ್ಲಿ 3.95 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಆರ್.ಸಿ.ಸಿ ಮನೆಯನ್ನು ಆರೋಪಿತ ಭಾಸ್ಕರ ಸುವರ್ಣ ಎಂಬಾತನಿಂದ 1,05,00,000 ಕ್ಕೆ ಖರೀದಿ ಮಾಡುವ ಬಗ್ಗೆ 2022 ರ ಆ.29 ರಂದು ಕರಾರು ಮಾಡಿಕೊಂಡಿದ್ದರು. ಅಲ್ಲದೆ ಆರೋಪಿತನು ಸತ್ಯನಾರಾಯಣ ಶೆಟ್ಟಿ ಅವರಿಂದ ಹಂತ ಹಂತವಾಗಿ ಒಟ್ಟು 13,00,000 ರೂ.ಹಣವನ್ನು ಪಡೆದುಕೊಂಡು ಜಾಗ ಮತ್ತು ಮನೆಯನ್ನು ಮಾರಾಟ ಮಾಡದೇ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಹಾಗೂ ಇತರ ಆರೋಪಿಗಳಾದ ಕಾಪುವಿನ ಪ್ರಭಾಕರ ಸಾಲ್ಯಾನ್, ಚಿಕ್ಕಬಳ್ಳಾಪುರದ ನಾಗರಾಜ್ ಕೆ.ಎನ್, ಬ್ರಹ್ಮಾವರದ ಕೆ.ಎನ್ ಗೀತಾ, ಕೆ.ಎನ್ ಸುಷ್ಮಾ , ಕಾಪುವಿನ ಶಿರ್ವದ ಸ್ಮೀತಾ ಎಂಬವರು ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ಆಸ್ತಿಯನ್ನು ನಾಗರಾಜ್ ಕೆ.ಎನ್, ಬ್ರಹ್ಮಾವರದ ಕೆ.ಎನ್ ಗೀತಾ ಎಂಬ ಇಬ್ಬರಿಗೆ ಕ್ರಯ ಸಾಧನ ಮಾಡಿಕೊಟ್ಟು, ಸತ್ಯನಾರಾಯಣ ಶೆಟ್ಟಿ ಅವರಿಗೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.