ಕಾಪು:ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಕಾಪು ಎ.14 (ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಪುವಿನ ಉಳಿಯಾರಗೋಳಿ ಗ್ರಾಮದಲ್ಲಿ ನಡೆದಿದೆ. 

ಸ್ಥಳೀಯ ನಿವಾಸಿ ಸನತ್‌ ಆತ್ಮಹತ್ಯೆಗೆ ಯತ್ನಿಸಿರುವವರು.

ಎ.10 ರಂದು ಬೆಳಿಗ್ಗೆ ಮೂಡುಬೆಳ್ಳೆ ನಿವಾಸಿಗಳಾದ ಸುರೇಶ್‌ ಹಾಗೂ ಅವರ ಹೆಂಡತಿ ಸೇರಿ ಉಳಿಯಾರಗೋಳಿ ಗ್ರಾಮದ ಸುನಿತಾ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಸುನಿತಾ ರವರು ಕೆಲಸಕ್ಕೆಂದು ಹೋಗಿದ್ದ ತಮ್ಮ ಮಗ ಸನತ್‌ ರವರಿಗೆ ತಿಳಿಸಿದ್ದರು. ಇದರಿಂದ ಮನನೊಂದುಕೊಂಡಿದ್ದ ಸನತ್‌ ರವರು ವಿಷ ಪದಾರ್ಥ ಸೇವಿಸಿ ರಾತ್ರಿ ವೇಳೆ ಅಸ್ವಸ್ಥ ಗೊಂಡಿದ್ದರು. 

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾಗಿ ಸುನಿತಾ ಅವರು ನೀಡಿದ ದೂರಿನಂತೆ ಕಾಫು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!