ಉಡುಪಿ: ಗಾಂಜಾ ಮಾರಾಟ-ಓರ್ವನ ಬಂಧನ
ಉಡುಪಿ ಎ.14(ಉಡುಪಿ ಟೈಮ್ಸ್ ವರದಿ): ಕಾನೂನು ಬಾಹೀರವಾಗಿ ಮಾರಾಟ ಮಾಡಲು 50 ಸಾವಿರ ರೂ.ಮೌಲ್ಯದ ಗಾಂಜಾ ಹೊಂದಿದ್ದ ವ್ಯಕ್ತಿಯೋರ್ವನನ್ನು ಉಡುಪಿಯ ಕೊಡವೂರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಡವೂರಿನ ಭವನ್ ಶಂಕರ್ (43) ಬಂಧಿತ ಆರೋಪಿ. ಈ ಬಗ್ಗೆ ಖಚಿತ ಮಾಹಿತಿಯ ಪಡೆದ ಉಡುಪಿ ಸೆನ್ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಬಂಧಿತನಿಂದ 50,000 ರೂ. ಮೌಲ್ಯದ 1 ಕೆ.ಜಿ . 82 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್, 2700 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.