ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ, ಹುಡುಕಿ ಕೊಟ್ಟವರಿಗೆ 15 ಸಾವಿರ ಬಹುಮಾನ!!

ಹೈದರಾಬಾದ್ ಮಾ.16 : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ

ಬಿಜೆಪಿ ವಿರುದ್ಧ ಟ್ವಿಟ್ ವಾರ್ ಆರಂಭಿಸಿರುವ ತೆಲಂಗಾಣ ಆಡಳಿತಾರೂಢ ಭಾರತ್ ರಾಷ್ಟ್ರೀಯ ಸಮಿತಿ, ಅಂಟಿಸಲಾಗಿರುವ ಪೋಸ್ಟರ್‍ನಲ್ಲಿ ಬಿ.ಎಲ್ ಸಂತೋಷ್ ಅವರ ಫೋಟೋ ಹಾಕಲಾಗಿದೆ. ಹೈದರಾಬಾದ್ ನ 2 ಪ್ರತ್ಯೇಕ ಸ್ಥಳಗಳಲ್ಲಿ ಶಾಸಕರನ್ನು ಖರೀದಿಸುವಲ್ಲಿ ಪರಿಣಿತರಾಗಿರುವ ಬಿಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ಹಾಕಲಾಗಿದೆ. ಬಿ.ಎಲ್ ಸಂತೋಷ್ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಎಲ್. ಸಂತೋಷ್ ಅವರನ್ನು ಹುಡುಕಿಕೊಟ್ಟರೆ ಅದಕ್ಕೆ ಬಹುಮಾನವಾಗಿ 15,00,000 ರೂ.ಗಳ ಭರವಸೆಯನ್ನು ಈಡೇರಿಸಲಾಗುವುದು ಎಂದು ಹೇಳಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಹೈದರಾಬಾದ್‍ನಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಪೋಸ್ಟರ್ ಅಂಟಿಸಲಾಗಿದ್ದು, ಈ ಪೋಸ್ಟರ್ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!