ಕೋಲಾರದಲ್ಲಿ ಬಿಜೆಪಿ ಯಾತ್ರೆ ದಢೀರ್ ರದ್ದು!!

ಕೋಲಾರ ಮಾ.13 : ನಗರದ ಬೈರೇಗೌಡ ಬಡಾವಣೆ ಬಳಿಯ ಮೈದಾನದಲ್ಲಿ ಭಾನುವಾರ ನಡೆಯಬೇಕಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ದಿಢೀರನೇ ಅರ್ಧಕ್ಕೆ ಮೊಟಕುಗೊಳಿಸಿ, ಸಾರ್ವಜನಿಕ ಸಭೆಯನ್ನೂ ರದ್ದು ಮಾಡಿರುವ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ `ಕಾರ್ಯಕ್ರಮ ಮುಂದೂಡಲಾಗಿದೆ’ ಎಂದಷ್ಟೇ ಹೇಳಿದೆ. ಆದರೆ ಅಧಿಕೃತ ಕಾರಣ ನೀಡಿಲ್ಲ. ಮೂಲಗಳ ಪ್ರಕಾರ ಯಾತ್ರೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರು ತುರ್ತು ಕರೆಯ ಮೇರೆಗೆ ವಾಪಸ್ ತೆರಳಿದರು ಎಂದು ತಿಳಿದು ಬಂದಿದೆ.

ನಗರದ ಬೈರೇಗೌಡ ಬಡಾವಣೆ ಬಳಿಯ ಮೈದಾನದಲ್ಲಿ ನಿನ್ನೆ ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ನಿಗದಿಯಾಗಿತ್ತು. ಬೃಹತ್ ವೇದಿಕೆಯನ್ನೂ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ, ಜನರಿಲ್ಲದೆ ಕುರ್ಚಿಗಳು ಖಾಲಿ ಇದ್ದವು. ಮಾಲೂರು ಪಟ್ಟಣದಲ್ಲಿ ರ್‍ಯಾಲಿ ನಡೆಸಿ ಬಳಿಕ ಕೋಲಾರ ತಾಲ್ಲೂಕಿನ ವಕ್ಕಲೇರಿ, ಪಾಶ್ರ್ವಗಾನಹಳ್ಳಿ, ಛತ್ರಕೋಡಿಹಳ್ಳಿ ಮಾರ್ಗವಾಗಿ ಯಾತ್ರೆಯು ನಿಗದಿತ ಎರಡು ಗಂಟೆ ತಡವಾಗಿ ನಗರಕ್ಕೆ ಬಂತು. ಆದರೆ, ನಗರದಲ್ಲಿ ಏಕಾಏಕಿ ಯಾತ್ರೆ ಮೊಟಕುಗೊಳಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!