ಗೆಳತಿಯ ಕರೆ-ಪತ್ನಿಯನ್ನು ಕಾರಿನಲ್ಲೇ ಬಿಟ್ಟು ಪತಿ ಪರಾರಿ

ಬೆಂಗಳೂರು ಮಾ.10 : ಗೆಳತಿಯ ಕೆರೆಗೆ ಪತ್ನಿಯನ್ನು ವಾಹನಗಳ ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನಲ್ಲೇ ಬಿಟ್ಟು ಪತಿರಾಯ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹದೇವಪುರ ಬಳಿ ನಡೆದಿದೆ.

`ಗೋವಾದಲ್ಲಿ ಕೆಲ ವರ್ಷ ವಾಸವಿದ್ದ ಯುವಕ, ಅಲ್ಲಿಯೇ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಈ ಸಂಗತಿ ಅವರ ಮನೆಯವರಿಗೆ ಗೊತ್ತಿರಲಿಲ್ಲ, ಯುವಕನನ್ನು ಬೆಂಗಳೂರಿಗೆ ಕರೆಸಿದ್ದ ಕುಟುಂಬಸ್ಥರು ಪರಿಚಯದ ಯುವತಿ ಜೊತೆ ಮದುವೆ ಮಾಡಿಸಿದ್ದರು. ‘ಇದರ ನಡುವೆಯೇ ಗೋವಾದ ಯುವತಿ, ಯುವಕನ ಮೊಬೈಲ್‍ಗೆ ಕರೆ ಮಾಡಲಾರಂಭಿಸಿದ್ದರು.

ಫೆ. 15ರಂದು ಮದುವೆಯಾಗಿದ್ದ ದಂಪತಿಗಳು ಪ್ರಾರ್ಥನಾ ಮಂದಿರಕ್ಕೆ ಹೋಗಿ ವಾಪಸು ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಇರುವಾಗಲೇ ಯುವತಿ ಕರೆ ಬಂದಿತ್ತು. ಹಳೇ ಪ್ರೀತಿ ವಿಷಯದ ಬಗ್ಗೆ ಪತ್ನಿಗೂ ಅನುಮಾನ ಬಂದಿತ್ತು. ಈ ಬಗ್ಗೆ ಪತ್ನಿ, ಪ್ರಶ್ನಿಸಲಾರಂಭಿಸಿದ್ದ ಕಾರಣಕ್ಕೆ ಯುವಕ, ಕಾರಿನಿಂದ ಇಳಿದು ಸ್ಥಳದಿಂದ ಪರಾರಿಯಾ ಗಿದ್ದಾನೆ. ಪತ್ನಿ ಕೆಲ ದೂರ ಹಿಂಬಾಲಿಸಿದರೂ ಸುಳಿವು ಸಿಕ್ಕಿಲ್ಲ’. ಈ ಬಗ್ಗೆ ಪತ್ನಿ ಹಾಗೂ ಅವರ ಮನೆಯವರು ಮಾರ್ಚ್ 5ರಂದು ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

error: Content is protected !!