4 ಬಿಜೆಪಿ ಮಂತ್ರಿಗಳು ಮುಂದಿನ ವಾರ ಕಾಂಗ್ರೆಸ್ ಗೆ : ಎಂ.ಲಕ್ಷ್ಮಣ್

ಮಡಿಕೇರಿ ಮಾ.2 : ಮುಂದಿನ ವಾರ ಬಿಜೆಪಿಯ ತಲಾ ನಾಲ್ಕು ಮಂದಿ ಸಚಿವರು ಮತ್ತು ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ’ ಎಂದು ಕೆಪಿಸಿಸಿ ವಕ್ತಾರರು ಹಾಗೂ ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `4 ಜನ ಮಂತ್ರಿಗಳು ಸೇರಿ ಒಟ್ಟು 8 ಜನ ಶಾಸಕರು ಮುಂದಿನ ವಾರ ಕಾಂಗ್ರೆಸ್ ಸೇರಲಿದ್ದು, ಅದರಲ್ಲಿ ಲಿಂಗಾಯತ ಸಮುದಾಯದ ಇಬ್ಬರು ಪ್ರಮುಖ ಮಂತ್ರಿಗಳು ಸೇರಲಿದ್ದಾರೆ’ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.17 ರಷ್ಟು ಹೆಚ್ಚಿಸಲಾಗಿದೆಯೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿ, ಅದಕ್ಕೆ ನೌಕರರರ ಸಂಘದ ಷಡಕ್ಷರಿ ಅವರು ಮುಷ್ಕರ ಹಿಂದಕ್ಕೆ ತೆಗೆದುಕೊಂಡ ಪ್ರಹಸನ ನಡೆದಿದೆ. ಶೀಘ್ರವೇ ಚುನಾವಣಾ ಘೋಷಣೆಯಾಗುವುದರಿಂದ ಈ ಘೋಷಣೆ ಜಾರಿಯಾಗುವುದೇ ಅನುಮಾನವಾಗಿದೆ.ನೌಕರರ ಸಂಘದ ಅಧ್ಯಕ್ಷರು ಮುಷ್ಕರದಿಂದ ಹಿಂದಕ್ಕೆ ಸರಿಯುವ ಮೂಲಕ ರಾಜ್ಯದ 10 ಲಕ್ಷ ನೌಕರರನ್ನು ವಂಚಿಸಿರುವುದಲ್ಲದೆ, ಎಸ್.ಪಿ.ಎಸ್ ನೌಕರರನ್ನು ನಡು ನೀರಿನಲ್ಲಿ ಕೈಬಿಟ್ಟಿರುವುದಾಗಿ ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!