ಉಡುಪಿ: ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಮೃತ್ಯು-ಇಬ್ಬರ ವಿರುದ್ಧ ದೂರು

ಉಡುಪಿ (ಉಡುಪಿ ಟೈಮ್ಸ್ ವರದಿ) : ಮಾವಿನ ಕಾಯಿ ಕೊಯ್ಯಲು ಮರ ಹತ್ತಿದ್ದ ವ್ಯಕ್ತಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಉಡುಪಿಯ ಸಂತೆಕಟ್ಟೆಯ ಹಳೆ ಮಾರ್ಕೇಟ್ ಬಳಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಬಿಶುದಾಸ್ (52) ಮೃತಪಟ್ಟವರು.

ಬಿಶುದಾಸ್ ಅವರು 2 ತಿಂಗಳುಗಳಿಂದ ಸಂತೆಕಟ್ಟೆಯ ಹಳೆ ಮಾರ್ಕೇಟ್‍ಬಳಿ ಮಾಂಡವಿಯವರು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಅಪಾರ್ಟ್‍ಮೆಂಟ್‍ನಲ್ಲಿ ಬಾಬೇರ್ಂಡಿಂಗ್ ಕೆಲಸ ಮಾಡಿಕೊಂಡಿದ್ದ ಖೋಕನ್ ಮನ್ನಾ ಎಂಬವರೊಂದಿಗೆ ವಾಸವಾಗಿದ್ದು, ಅಡುಗೆ ಕೆಲಸ ಮಾಡಿಕೊಂಡಿದ್ದರು. ಅಪಾರ್ಟ್‍ಮೆಂಟ್‍ನ ವಿದ್ಯುತ್‍ಗಾಗಿ ಸರ್ವೀಸ್ ವಯರ್‍ನ್ನು ಮರಕ್ಕೆಕಟ್ಟಿಯಲ್ಲಿಂದ ಅಪಾರ್ಟ್‍ಮೆಂಟ್‍ಕೆಡೆಗೆ ತೆಗೆದುಕೊಂಡು ಬಂದಿದ್ದು, ನಿನ್ನೆ ಬೆಳಿಗ್ಗೆ ಬಿಶುದಾಸ್‍ರವರು ಅಪಾರ್ಟ್ ಮೆಂಟ್ ಬಳಿ ಇರುವ ಮರದಿಂದ ಮಾವಿನ ಕಾಯಿ ಕೀಳಲು ಮರ ಹತ್ತಿದ್ದು, ಮಾವಿನ ಮರದಲ್ಲಿ ಕಟ್ಟಿರುವ ವಿದ್ಯುತ್ ಸರ್ವೀಸ್ ವಯರ್‍ನಿಂದ ವಿದ್ಯುತ್ ಹರಿದು ಬಿಶುದಾಸ್ ಅವರು ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಬಿಶುದಾಸ್‍ನ ಸಾವಿಗೆ ಅಪಾರ್ಟ್‍ಮೆಂಟ್‍ನ ಸೂಪರ್ ವೈಸರ್ ಅಲ್ವಿನ್ ಕ್ರಾಡ್ರಸ್ ಹಾಗೂ ಇಲೆಕ್ಟ್ರಿಶಿಯನ್ ಮಂಜುನಾಥ ರವರ ನಿರ್ಲಕ್ಷತನವೇ ಕಾರಣವಾಗಿದೆ ಎಂಬುದಾಗಿ ಖೋಕನ್‍ಮನ್ನಾ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!