ಕೆಫೆ ಕಾಫಿ ಡೇ ಗೆ ನೂತನ ಸಿಇಒ ಆಗಿ ಸಿದ್ಧಾರ್ಥ ಪತ್ನಿ ಮಾಳವಿಕಾ ನೇಮಕ

ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ನಿಧನದಿಂದ ತೆರವಾಗಿದ್ದ ಕೆಫೆ ಕಾಫಿ ಡೇ ಗೆ ನೂತನ ಸಿಇಒ ನೇಮಕ ಮಾಡಲಾಗಿದೆ.

ಕಳೆದ ವರ್ಷ ಸಿದ್ಧಾರ್ಥ ಹೆಗ್ಡೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಸಿದ್ಧಾರ್ಥ ಹೆಗ್ಡೆ ಸಾವಿನ ಬಳಿಕ ಕೆಫೆ ಕಾಫಿ ಡೇಗೆ ಕಳೆದ ಒಂದು ವರ್ಷದಿಂದ ಸಿಇಒ ನೇಮಕವಾಗಿರಲಿಲ್ಲ. ಇದೀಗ ಮಾಜಿ ಮುಖ್ಯ ಮಂತ್ರಿ ಪುತ್ರಿ ,ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಅವರನ್ನು ನೂತನ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಸಿದ್ಧಾರ್ಥ್ ನಿಧನದ ಬಳಿಕ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್.ವಿ. ರಂಗನಾಥ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು

Leave a Reply

Your email address will not be published. Required fields are marked *

error: Content is protected !!