ಭಾರತ್ ಬಂದ್: ಉಡುಪಿಯಲ್ಲಿ ನಾಳೆ ಬಸ್ ಸ್ಥಗಿತ ಇಲ್ಲ- ಬಸ್ ಮಾಲಕರ ಸಂಘ

ಉಡುಪಿ(ಉಡುಪಿ ಟೈಮ್ಸ್ ವರದಿ): ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆ ಕುರಿತು ನಾಳೆ (ಡಿ 08 ) ರೈತ ಸಂಘಟನೆಗಳು ನೀಡಿದ ಭಾರತ್ ಬಂದ್ ಗೆ ಉಡುಪಿಯಲ್ಲಿ ಬಸ್ಸುಗಳು ಎಂದಿನಂತೆ ಸಂಚರಿಸಲಿದೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್ ‘ಉಡುಪಿ ಟೈಮ್ಸ್’ ಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಗಳನ್ನು ವಾಪಸ್ಸು ಪಡೆಯಲು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ 11 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದು, ಇದೀಗ ಅದರ ಮುಂದಿನ ಹೋರಾಟದ ಭಾಗವಾಗಿ ಜನತಾ ಕರ್ಪ್ಯೂ ವನ್ನು ನಾಳೆ(ಡಿ 08 ) ರಂದು ಕರೆ ನೀಡಿದೆ. ಅನೇಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿದೆ. ಆದರೆ ಉಡುಪಿಯಲ್ಲಿ ಬಸ್ಸುಗಳ ಸೇವೆ ನಿರಾಳವಾಗಿದ್ದು, ಪ್ರಯಾಣಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲವೆಂದು ಸುರೇಶ್ ನಾಯಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!