ಕುಂದಾಪುರ: ವ್ಯಕ್ತಿ ನಾಪತ್ತೆ

ಕುಂದಾಪುರ ಮೇ 28 (ಉಡುಪಿ ಟೈಮ್ಸ್ ವರದಿ): ಶೃಂಗೇರಿಯಲ್ಲಿರುವ ತಂಗಿಯ ಮನೆಗೆ ಹೋಗುವುದಾಗಿ ತಿಳಿಸಿ ಹೋದ ಗುಲ್ವಾಡಿ ಗ್ರಾಮದ ವೆಂಕಟೇಶ್ ಶೆಟ್ಟಿ ಎಂಬವರು ಮೇ. 24 ರಿಂದ ನಾಪತ್ತೆಯಾಗಿದ್ದಾರೆ.

ಮೇ 24 ರಂದು ವೆಂಕಟೇಶ್ ಶೆಟ್ಟಿ (72) ಅವರು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸೌಕೂರು ಚಿಕ್ಕಪೇಟೆಯ ಮನೆಯಿಂದ ಶೃಂಗೇರಿಯಲ್ಲಿರುವ ತಂಗಿ ಯಶೋಧರವರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಬಳಿಕ ಮನೆಗೂ ಬಾರದೇ ಶೃಂಗೇರಿಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ವೆಂಕಟೇಶ್ ಶೆಟ್ಟಿ ಅವರ ಮಗ ಗಿರೀಶ್ ಶೆಟ್ಟಿ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!