ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ ಸಿಜ್ಯೆಸ್ ತಾಕೊಡೆ ಇನ್ನಿಲ್ಲ
ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ, ಕೊಂಕಣಿ ಹಾಸ್ಯ ಬರಹಗಾರ ಸಿರಿಲ್ ಜಿ ಸಿಕ್ವೇರಾ (71) ಅವರು ಶನಿವಾರ ಮೇ 28 ರಂದು ನಿಧನರಾದರು.
ಮಂಗಳೂರಿನ ತಾಕೊಡೆಯಲ್ಲಿ ಜನಿಸಿದ ಸಿರಿಲ್ ಅವರು 12 ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅವರು ರಾಕ್ನೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ ‘ಕಾಣಿಕ್’ ಮತ್ತು ‘ಉಮಾಳೊ’ ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು. ಸಿಜ್ಯೆಸ್ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದಿದ್ದರೂ, ಅವರ ಹಾಸ್ಯಮಯ ಬರಹಗಳು ಸಾಹಿತ್ಯ ಪ್ರೇಮಿಗಳನ್ನು ಆಕರ್ಷಿಸುತ್ತಿತ್ತು.
ಸಿಜ್ಯೆಸ್ ಅವರಿಗೆ ಗೆ ಕೊಂಕಣಿ ಬಾಷಾ ಮಂಡಲ್, ಗೋವಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂದೇಶ, ಮತ್ತು ಕೊಂಕಣಿ ಕುಟಮ್ ಬಹ್ರೇನ್ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.
ಸಿಜ್ಯೆಸ್ ಅವರು ಪತ್ನಿ ಸಿಲ್ವಿಯಾ ಮತ್ತು ಮಕ್ಕಳಾದ ವಿಜೇಶ್ ಮತ್ತು ವಿಜೇತಾ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.