ರಸ್ತೆ, ಸೇತುವೆ ಏಕೆ ನಿರ್ಮಿಸಿಲ್ಲ?: ಸಂಸದೆ ಶೋಭಾ ಕರಂದ್ಲಾಜೆಗೆ ನಾಗರಿಕರ ಪ್ರಶ್ನೆ

ಚಿಕ್ಕಮಗಳೂರು: ಸೇತುವೆ ನಿರ್ಮಾಣ, ರಸ್ತೆ ರಿಪೇರಿ ಕುರಿತಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಶನಿವಾರ ಅತಿವೃಷ್ಟಿ ಹಾನಿ ವೀಕ್ಷಣೆಗೆ ತೆರಳಿದ್ದ ಸಂಸದರನ್ನು ತರಾಟೆ ತೆಗೆದುಕೊಂಡಿದ್ದಾರೆ.

‘ಕಳೆದ ವರ್ಷ ಮಳೆಗೆ ರಸ್ತೆ, ಸೇತುವೆ ಹಾಳಾಗಿದ್ದರೂ ಈವರೆಗೂ ಯಾಕೆ ಕ್ರಮ ವಹಿಸಿಲ್ಲ. ಕಾಮಗಾರಿಗೆ ₹ 4 ಕೋಟಿ ಬಿಡುಗಡೆಯಾಗಿದೆ ಹೇಳುತ್ತೀರಿ. ಆದರೆ, ವರ್ಷ ಕಳೆದರೂ ಕಾಮಗಾರಿ ಏಕೆ ಮಾಡಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮೂಡಿಗೆರೆಯ ಬಂಕೇನಹಳ್ಳಿಯ ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು.  ‘ಇಂಥ ಪ್ರದೇಶದಲ್ಲಿ ಸ್ಥಳೀಯರಿಂದ ಕಾಮಗಾರಿ ಮಾಡಿಸಿದರೆ ಅವರು ಬಿಲ್‌ ಮಾಡಿಕೊಂಡು ಹೋಗುತ್ತಾರಷ್ಟೇ. ಇಲ್ಲಿ ಮಿಲಿಟರಿಯವರಿಂದ ಕಾಮಗಾರಿ ಮಾಡಿಸಲು ಕ್ರಮ ವಹಿಸುತ್ತೇವೆ’ ಎಂದು ಶೋಭಾ ಜನರನ್ನು ಸಮಾಧಾನ ಪಡಿಸಿದರು.

Leave a Reply

Your email address will not be published. Required fields are marked *

error: Content is protected !!