ದ್ವಿತೀಯ ಪಿಯುಸಿ ಸಾಧಕಿ ಶ್ರೀಲಕ್ಷ್ಮೀ ಆಚಾರ್ಯಗೆ ಅಭಿನಂದನೆ

ಬೈಂದೂರು: ವಿಶ್ವಕರ್ಮ ಕಲಾ ಸಂಗಮ ಫೇಸ್‌ಬುಕ್ ಪೇಜ್‌ ಬಳಗದವತಿಯಿಂದ ಶೈಕ್ಷಣಿಕ ಸಾಧಕಿಗೆ ಅಭಿನಂದನಾ ಸಮಾರಂಭ ಭಾನುವಾರ ಪರ್ಕಳದಲ್ಲಿ ನಡೆಯಿತು.

ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೊದಲ ಸ್ಥಾನ ಗಳಿಸಿದ ಶ್ರೀಲಕ್ಷ್ಮೀ ಆಚಾರ್ಯ ಪೆರ್ಡೂರು ಅವರನ್ನು ವಿಶ್ವಕರ್ಮ ಕಲಾ ಸಂಗಮದ ದೀಪಿಕಾ ಗಣೇಶ್ ಆಚಾರ್ಯ ಸನ್ಮಾನಿಸಿದರು.

ಶ್ರೀಲಕ್ಷ್ಮೀ  ಅವರ ತಂದೆ ಪೆರ್ಡೂರು ಸುಧಾಕರ ಆಚಾರ್ಯ, ತಾಯಿ ಪೂರ್ಣಿಮಾ ಸುಧಾಕರ ಆಚಾರ್ಯ, ಬಳಗದ ಮುಖ್ಯಸ್ಥರಾದ ಪುರೋಹಿತ್ ದಾಮೋದರ್ ಶರ್ಮ ಬಾರ್ಕೂರು, ಗಣೇಶ್ ಆಚಾರ್ಯ ಪರ್ಕಳ, ಎಚ್. ಸುಶಾಂತ್ ಆಚಾರ್ಯ ಬೈಂದೂರು, ಗುರುಮೂರ್ತಿ ಆಚಾರ್ಯ ಬೈಂದೂರು ಇದ್ದರು.ಫೇಸ್‌ಬುಕ್ ಬಳಗದ ಆಶಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕರ್ನಾಟಕ ಕಲಾರತ್ನ ಪ್ರಶಸ್ತಿ ಪಡೆದ ದೀಪಿಕಾ ಗಣೇಶ್ ಆಚಾರ್ಯ ಇವರಿಂದ ಗಾನ ಮಾಧುರ್ಯ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!