ಬ್ರಹ್ಮಾವರ: ದೀಪಾವಳಿ ಪ್ರಯುಕ್ತ ಪ್ರಸಿದ್ಧ ವಸ್ತ್ರಗಳ ಮಳಿಗೆ “ಸತ್ಯನಾಥ ಸ್ಟೋರ್ಸ್”ನಲ್ಲಿ ವಿಶೇಷ ಮಾರಾಟ

ಉಡುಪಿ ಅ.30 (ಉಡುಪಿ ಟೈಮ್ಸ್ ವರದಿ): ದೀಪಾವಳಿ ಪ್ರಯುಕ್ತ ಕರಾವಳಿ ಮಲೆನಾಡು ಭಾಗದ ಪ್ರಸಿದ್ಧ ವಸ್ತ್ರಗಳ ಮಳಿಗೆ “ಸತ್ಯನಾಥ ಸ್ಟೋರ್ಸ್“ನಲ್ಲಿ ವಿಶೇಷ ಮಾರಾಟವನ್ನು ಆಯೋಜಿಸಲಾಗಿದೆ.

ಈಗಾಗಲೇ ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಸತ್ಯನಾಥ್ ಸ್ಟೋರ್ಸ್ ಉತ್ತಮ ಗುಣಮಟ್ಟದ ಸೇವೆಗೆ ಗ್ರಾಹಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ರಹ್ಮಾವರ, ತೀರ್ಥಹಳ್ಳಿ ಕೊಪ್ಪದಲ್ಲಿರುವ ಸತ್ಯನಾಥ್ ಸ್ಟೋರ್ಸ್’ನಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ನೀಡಲಾಗುತ್ತದೆ. ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿಯೂ ದೀಪಾವಳಿ ವಿಶೇಷ ಮಾರಾಟ ಪ್ರಯುಕ್ತ ನವನವೀನ ಬ್ರಾಂಡ್‍ಗಳ ಬೃಹತ್ ಸೀರೆ ಮೇಳವನ್ನು ಆಯೋಜಿಸಲಾಗಿದೆ.

ಇಲ್ಲಿ ಪ್ರತಿಷ್ಠಿತ ಕಂಪೆನಿಗಳ ವಸ್ತ್ರಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಎಲ್ಲಾ ವಯಸ್ಸಿನವರಿಗೆ ಬೇಕಾದ ನವ ನವೀನ ಬಟ್ಟೆಗಳು ಸಿಗಲಿದೆ. ಮದುವೆ ಜವುಳಿ ಸಹಿತ ಕಾಂಜೀವರಂ, ಬನಾರಸ್, ಧರ್ಮಾ ವರಂ, ಕಾಟನ್ ಸಾರಿ, ಕಾಟನ್ ಸಿಲ್ಕ್ ಕೋಲ್ಕತಾ ಕಾಟನ್, ಬಾಂಗ್ಲಾ ಕಾಟನ್, ಫ್ಯಾನ್ಸಿ ಡಿಸೈನರ್ ಸಾರೀಸ್, ಬೈಡಲ್ ಲೆಹಂಗಾ, ಲಾಂಗ್ ಟಾಪ್, ಚೂಡಿದಾರ್, ಡ್ರೆಸ್ ಮೆಟಿರಿಯಲ್ಸ್, ಕುರ್ತೀಸ್, ಮಕ್ಕಳ ಉಡುಪುಗಳು, ಪುರುಷರ ಉಡುಪುಗಳು, ಹ್ಯಾಂಡ್ ಲೂಮ್ಸ್, ಬ್ರಾಂಡೆಡ್ ಡಿಸೈನ್ ಸಾರಿ, ಬೆಡ್ ಶೀಟ್ಸ್, ಬ್ಲಾಂಕೆಟ್ ಸಹಿತ ನಾನಾ ಕಂಪೆನಿಗಳ ವಿವಿಧ ವಿನ್ಯಾಸದ ಉಡುಪುಗಳ ಅಪೂರ್ವ ಸಂಗ್ರಹವಿದೆ.

Leave a Reply

Your email address will not be published. Required fields are marked *

error: Content is protected !!