ಮಣಿಪಾಲ: ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ನಾಪತ್ತೆ

ಮಣಿಪಾಲ ಅ.30(ಉಡುಪಿ ಟೈಮ್ಸ್‌ ವರದಿ): ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಅಂಬಲಪಾಡಿಯ ರಾಜರಾಮ್ (53) ನಾಪತ್ತೆಯಾಗಿರುವವರು. ಈ ಬಗ್ಗೆ ನಾಪತ್ತೆಯಾಗಿರುವವರ ಅಣ್ಣ ಕೆ.ರತ್ನಾಕರ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ  ಇವರು 35 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು, ಅವರಿಗೆ ಮಾನಸಿಕ ಖಾಯಿಲೆ ಉಲ್ಬಣಿಸಿದ ಕಾರಣ ನಿನ್ನೆ ಇವರನ್ನು ದೂರುದಾರರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ದೂರುದಾರರು ರಾಜಾರಾಮರವರನ್ನು ಆಸ್ಪತ್ರೆಯ ಒಪಿಡಿ ಬಳಿ ಕೊರಿಸಿ ಕೌಂಟರ್ ಬಳಿ ಹೋಗಿದ್ದರು. ಕೌಂಟರ್  ನಲ್ಲಿ ವಿಚಾರಿಸಿ ಬಂದು ನೋಡಿದಾಗ ರಾಜರಾಮ ಕೂರಿಸಿದ ಜಾಗದಲ್ಲಿ ಇಲ್ಲದೆ ಇರುವುದು ಕಂಡು ಬಂದಿದೆ. ರಾಜರಾಮ ಈ ಹಿಂದೆಯು ಸಹ 10 ರಿಂದ 12 ಬಾರಿ ಹೇಳದೆ ಮನೆಯಿಂದ ಹೋದವರು ಬಳಿಕ ಮನೆಗೆ ವಾಪಾಸ್ಸು ಬರುತ್ತಿದ್ದರು. ಆದ್ದರಿಂದ ಈ ಬಾರಿ ಕೂಡಾ ಅವರು ಬರಬಹುದು ಎಂದು ಕಾದಿದ್ದು, ಆದರೆ ರಾಜಾರಾಮ ರವರು ಬಾರದೆ ಕಾಣೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!