ಸುಬ್ರಮಣ್ಯ ರೈಲ್ವೆ ಹಳಿಯಲ್ಲಿ ಬಿರುಕು: ರೈಲು ಚಾಲಕನ ಸಮಯ ಪ್ರಜ್ಞೆ ತಪ್ಪಿದ ಭಾರೀ ದುರಂತ

ಸುಬ್ರಹ್ಮಣ್ಯ, ಅ.26: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಬಿರಿಕು ಬಿಟ್ಟಿದ್ದ ಹಳಿಯಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.

ನೆಟ್ಟಣದಿಂದ ಮುಂದಕ್ಕೆ ಎಡಮಂಗಲ ಸಮೀಪದ ಸುಬ್ರಮಣ್ಯ ಮಂಗಳೂರು ರೈಲ್ವೆ ಹಳಿ ಬಿರುಕು ಬಿಟ್ಟಿಟ್ಟಿತ್ತು. ಮುಂಜಾನೆ ಸಂಚರಿಸುವ ಬೆಂಗಳೂರು – ಕಾರವಾರ ರೈಲು ಎಡಮಂಗಲ ಸಮೀಪ ತಲುಪಿದಾಗ ರೈಲಿನ ಒಂದು ಭೋಗಿ ಚಲಿಸಿದ ಬಳಿಕ ಹಳಿ ಬಿರುಕು ಬಿಟ್ಟಿರುವುದು ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಕಾರ್ಯಾಚರಣೆ ನಡೆಸಿ ದುರಸ್ತಿ ನಡೆಸಿ ರೈಲು ಸಂಚರಿಸಲು ಅವಕಾಶ ನೀಡಲಾಯಿತು. ಇದೀಗ ಸ0ಭವ್ಯ ಅನಾಹುತವನ್ನು ತಪ್ಪಿಸಿದ ಚಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!