ಉದ್ಯಾವರ: ಖಾಯಂ ಪಿಡಿಒ ನೇಮಕ ಆಗ್ರಹಿಸಿ‌ ಅ.26 ರಂದು ಪ್ರತಿಭನೆ

ಉಡುಪಿ ಅ.25 (ಉಡುಪಿ ಟೈಮ್ಸ್ ವರದಿ): ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ನಿಷ್ಕ್ರಿಯತೆ  ವಿರುದ್ಧ ಮತ್ತು ಖಾಯಂ ಪಿಡಿಒ ನೇಮಕ ಆಗ್ರಹಿಸಿ‌ ಅ.26 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯಾವರ ಗ್ರಾಮ ಪಂಚಾಯತ್ ಕಛೇರಿಯ ಎದುರು ಪತಿಭಟನಾ ಸಭೆ ನಡೆಯಲಿದೆ. 

ಈ ಪ್ರತಿಭಟನಾ ಸಭೆಯ ಸಲುವಾಗಿ ಬೆಳಿಗ್ಗೆ ಗಂಟೆ 9.30 ಕ್ಕೆ ಉದ್ಯಾವರ ಮಸೀದಿ ಬಳಿಯ ಪಕ್ಷದ ಕಛೇರಿಯ ಆವರಣದಿಂದ ಪ್ರತಿಭಟನಾ ಸ್ಥಳಕ್ಕೆ ಕಾರ್ಯಕರ್ತರ ಕಾಲ್ನಡಿಗೆ ಜಾಥ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಭಾಗವಹಿಸಲಿದ್ದಾರೆ ಎಂದು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ‌ಅಧ್ಯಕ್ಷ ಗಿರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!