ಬೈಂದೂರು: ಹಣದ ಬೇಡಿಕೆ ಇಟ್ಟು ವ್ಯಕ್ತಿಗೆ ಹಲ್ಲೆ, ಕೊಲೆ ಬೆದರಿಕೆ

ಬೈಂದೂರು ಅ.21(ಉಡುಪಿ ಟೈಮ್ಸ್ ವರದಿ): ಹಣದ ಬೇಡಿಕೆ ಇಟ್ಟು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೈಂದೂರಿನ ಶಿರೂರು ಗ್ರಾಮದ  ನೀರಗದ್ದೆಯಲ್ಲಿ ನಡೆದಿದೆ.

ಈ ಬಗ್ಗೆ ಅಶ್ವೀಜ್ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅಶ್ವೀಜ್ ಶೆಟ್ಟಿ ಅವರು ಬೈಂದೂರು ತಾಲೂಕಿನ ಶಿರೂರು ಗ್ರಾಮದ ನೀರಗದ್ದೆಯ  ಬಾರ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅ.20 ರಂದು ಅಶ್ವೀಜ್ ಶೆಟ್ಟಿ ಬಾರ್ ನಲ್ಲಿ ಕೆಲಸದಲ್ಲಿರುವಾಗ ರಾತ್ರಿ 9 ಗಂಟೆಗೆ ಅವರ ಪರಿಚಯದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬುವವರು ಬಾರ್ ಗೆ ಬಂದು ಅಶ್ವೀಜ್ ಶೆಟ್ಟಿಯನ್ನು ಹೊರಗೆ ಕರೆದೊಯ್ದು 20,000 ರೂ. ಹಣ ಕೇಳಿದ್ದಾರೆ. ಈ ವೇಳೆ ಅಶ್ವೀಜ್ ಶೆಟ್ಟಿ ಅವರ ಬಳಿ ಹಣ ಇಲ್ಲದ ಕಾರಣ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ ಬಳಿಕ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಂಪ್ಲೆಂಟ್ ಕೊಟ್ಟರೆ ಅವರ ಮಾಲೀಕನನ್ನು ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!