ಮಂಗಳೂರು: ಪತ್ನಿ ಮತ್ತು ಮಗನಿಗೆ ಚಾಕುವಿನಿಂದ ಇರಿದು ಹಲ್ಲೆ

ಮಂಗಳೂರು, ಸೆ.14: ಪತ್ನಿ ಮತ್ತು ಮಗನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಸ್ಥಳೀಯ ರಮೇಶ್ ಬಂಗೇರ ಹಲ್ಲೆ ನಡೆಸಿರುವ ಆರೋಪಿ. ಬೇಬಿ ಕುಂದರ್ ಮತ್ತು ಮಗ ಅಶ್ವಿನ್ ಕುಮಾರ್ ಹಲ್ಲೆಗೊಳಗಾದವರು.
ರಮೇಶ್ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿ ಕೈಯಲ್ಲಿ ಚಾಕು ಹಿಡಿದು ಮಗನಿಗೆ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದ್ದಾನೆ.

ಈ ವೇಳೆ  ಬೇಬಿ ಅವರು ತನ್ನ ಎಡಗೈಯಿಂದ ಚಾಕುವನ್ನು ತಡೆದಾಗ ಗಾಯಗೊಂಡಿದ್ದು, ಅಶ್ವಿನ್ ತನ್ನ ತಂದೆಯನ್ನು ತಡೆಯಲು ಯತ್ನಿಸಿದಾಗ ರಮೇಶ್ ಚಾಕುವಿನಿಂದ ಮಗನ ಬಲಗೈಗೆ  ಗಾಯಗೊಳಿಸಿದ್ದಾನೆ. ಗಾಯಗೊಂಡ ಬೇಬಿ ಸಹಾಯಕ್ಕಾಗಿ ಕೂಗಿದಾಗ, ನೆರೆಹೊರೆಯವರು ಅವರ ಸಹಾಯಕ್ಕೆ ಅಲ್ಲಿಗೆ ಬಂದಿದ್ದಾರೆ. ಇನ್ನು ರಮೇಶ್ ತನ್ನ ಪತ್ನಿ ಮತ್ತು ಮಗನಿಗೆ ಮನೆಯಿಂದ ಕೂಡಲೇ ಹೊರಹೋಗುವಂತೆ ಹೇಳಿದ್ದು, ಅವರು ಹೊರ ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!