ಕ್ಯಾಮೆರಾ ನೋಡಿ ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ!

ಬೆಂಗಳೂರು: ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದದ ವೇಳೆ ಪ್ರಧಾನಿ ಮೋದಿ ಗದ್ಗಿತರಾದ ಬಗ್ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ “ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ. ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್‌ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ ಎಂದು ಟೀಕಿಸಿದೆ.

“ಕಣ್ಣೀರು” ಹೇಡಿಯ ಪ್ರಮುಖ ಅಸ್ತ್ರ!! ನರೇಂದ್ರ ಮೋದಿ ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ “ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು. ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.

ಸದಾ ಜನತೆಯ ದಿಕ್ಕುತಪ್ಪಿಸುತ್ತಲೇ ಬಂದಿರುವ ಬಿಜೆಪಿ ತನ್ನ ಫೂಲ್ ಕಿಟ್ ಮೂಲಕ ಕಾಂಗ್ರೆಸ್ ಮೋದಿ ಹೆಸರು ಕೆಡಿಸಲು ಯತ್ನಿಸಿತ್ತು ಎಂದು ಸುಳ್ಳು ಬಿತ್ತರಿಸಿತ್ತು. ಈಗಾಗಲೇ ಕೆಟ್ಟಿರುವ ಸ್ವಯಂಘೋಷಿತ ನಕಲಿ ವಿಶ್ವನಾಯಕನ ಹೆಸರು ಕೆಡಿಸಲು ಅವಕಾಶವೆಲ್ಲಿದೆ! ಬಿಜೆಪಿಗೆ ಜನರ ಪ್ರಾಣದ ಚಿಂತೆಗಿಂತ, ಕೆಡುತ್ತಿರುವ ಹೆಸರಿನ ಬಗ್ಗೆಯೇ ಚಿಂತೆಯಾಗಿದೆ! ಎಂದು ಕೆಪಿಸಿಸಿ ಲೇವಡಿ ಮಾಡಿದೆ.

ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ ಛಿಮಾರಿ ಹಾಕಿಸಿಕೊಳ್ಳುತ್ತಿರುವ ನಕಲಿ ‘ವಿಶ್ವನಾಯಕ’ನ ಹೆಸರು ಉಳಿಸಲು ಟೂಲ್ ಕಿಟ್ ಎಂಬ ಅಡ್ಡದಾರಿ ಹಿಡಿದಿದ್ದ ಬಿಜೆಪಿ ಸಂಬಿತ್ ಪಾತ್ರಾ ಎಂಬ ಟ್ವೀಟ್‌ನ್ನು ‘ದಿಕ್ಕುತಪ್ಪಿಸುವುದಾಗಿದೆ’ ಎಂದು ಟ್ವಿಟರ್ ಗುರುತಿಸಿದೆ.

1 thought on “ಕ್ಯಾಮೆರಾ ನೋಡಿ ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ!

  1. Vehicles rodige ilita illa adaru modi hana hana anta petrol ge rate jaasti maadi saitaane avanige hanaave mukhya

Leave a Reply

Your email address will not be published. Required fields are marked *

error: Content is protected !!