ಕಾರಿನಲ್ಲಿ ಉಸಿರುಗಟ್ಟಿ ಆಟವಾಡುತ್ತಿದ್ದ ನಾಲ್ಕು ಮಕ್ಕಳ ದಾರುಣ ಅಂತ್ಯ

ಚಂಡಿನಗರ(ಉತ್ತರ ಪ್ರದೇಶದ): ಮಕ್ಕಳು ಆಟವಾಡುತ್ತಿದ್ದ ಕಾರು ಲಾಕ್ ಆಗಿ ಆಟವಾಡುತ್ತಿದ್ದ ಮಕ್ಕಳ ಪೈಕಿ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶ ದ ಬಾಗ್ಪತ್ ಜಿಲ್ಲೆಯ ಸಿಂಗೋಲಿ ಟಂಗಾ ಗ್ರಾಮದಲ್ಲಿ ನಡೆದಿದೆ.

ದೀಪಾ(8), ವಂದನಾ(4), ಅಕ್ಷಯ್(4), ಕೃಷ್ಣ(7) ಮೃತಪಟ್ಟ ಮಕ್ಕಳು. ಘಟನೆಯಲ್ಲಿ ಶಿವನ್ ಎಂಬ 8 ವರ್ಷದ ಮಗುವನ್ನು ರಕ್ಷಿಸಲಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಮಗುವಿನ ಸ್ಥಿತಿ ಗಂಭೀರ ವಾಗಿದೆ ಎಂದು ತಿಳಿದು ಬಂದಿದೆ.

ಮೃತ 4 ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು,ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಚಂಡಿನಗರ ಪೊಲೀಸ್ ಠಾಣಾ ಪ್ರದೇಶದ ಸಿಂಗೋಲಿ ಟಂಗಾ ಗ್ರಾಮದ ಮನೆಯೊಂದರಲ್ಲಿ ಮಕ್ಕಳ ಕುಟುಂಬಿಕರು ಮನೆಯ ಒಳಗಡೆ ಇದ್ದರು. ಈ ವೇಳೆ ಮಕ್ಕಳು ಸೇರಿ ಮನೆಯ ಹೊರಗಡೆ ಇದ್ದ ಕಾರಿನಲ್ಲಿ ಇದ್ದರು. ಕಾರು ಆಕಸ್ಮಿಕ ವಾಗಿ ಆಟೋ ಲಾಕ್ ಆಗಿದ್ದು ಕಾರಿನೊಳಗಡೆ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!