ರಾಜಕಾರಣಕ್ಕೆ ಜೈ ಶ್ರೀರಾಮ್ ಬಳಕೆಯಿಂದ ಬಂಗಾಳದಲ್ಲಿ ಬಿಜೆಪಿಗೆ ಸೋಲು- ಕಪಿಲ್ ಸಿಬಲ್

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಟಿಎಂಸಿ ಹಾಗೂ ಮೂರನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಲು ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸೋಮವಾರ ಅಭಿನಂದಿಸಿದ್ದಾರೆ.

ಟಿಎಂಸಿಯ ಗೆಲುವು ಕುರಿತಂತೆ ಟ್ವೀಟ್ ಮಾಡಿರುವ ಅವರು, ದುರಂಹಕಾರ, ತೋಳ್ಬಲ, ಹಣಬಲ ಮತ್ತು ಶ್ರೀರಾಮನನ್ನು 
ರಾಜಕೀಯಕ್ಕೆ ಬಳಸಿದ್ದರಿಂದ ಬಿಜೆಪಿ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ.

ವಿಭಜನೆಯ ಸಿದ್ದಾಂತ ಮತ್ತು ಚುನಾವಣಾ ಆಯೋಗ ಬಳಕೆಯಿಂದಲೂ ಸಹ ಬಿಜೆಪಿ ಸೋಲು ಅನುಭವಿಸುವಂತಾಗಿದೆ. 
ಅವೆಲ್ಲವನ್ನೂ ಮೆಟ್ಟಿ ನಿಂತು ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!