ಕುಂದಾಪುರ: ಬಾವಿಗೆ ರಿಂಗ್ ಹಾಕುವಾಗ ಆಯ ತಪ್ಪಿ ಬಿದ್ದು ಯುವಕ ಮೃತ್ಯು

ಕುಂದಾಪುರ ಎ.29 (ಉಡುಪಿ ಟೈಮ್ಸ್ ವರದಿ): ಬಾವಿಗೆ ರಿಂಗ್ ಹಾಕುವ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡುಗೋಪಾಡಿಯಲ್ಲಿ‌ ನಡೆದಿದೆ.

ಶ್ರೀನಿವಾಸ (29) ಮೃತಪಟ್ಟವರು. ಇವರು, ಉದಯ ಎಂಬುವವರ ಜೊತೆಯಲ್ಲಿ ಮೂಡುಗೋಪಾಡಿಯ ಸತೀಶ್ ಶೆಟ್ಟಿ ಎಂಬುವವರ ಜಾಗದಲ್ಲಿ ಬಾವಿಗೆ ರಿಂಗ್ ಹಾಕುವ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಉದಯರವರು ಶ್ರೀನಿವಾಸ ಅವರ ತಂದೆ ರಾಮ ನಾಯ್ಕ ಅವರಿಗೆ  ಕರೆ ಮಾಡಿ ಮಾಹಿತಿ ನೀಡಿದ್ದರು. 15 ಅಡಿ ಆಳದ ಬಾವಿಗೆ ಬಿದ್ದು ಬಾವಿ ರಿಂಗಿಗೆ ಅಳವಡಿಸಿದ ಕಬ್ಬಿಣದ ರಾಡ್ ತಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ  ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!