ಮಗಳ ಮದುವೆಗೆ ಕೂಡಿಟ್ಟಿದ್ದ 2ಲಕ್ಷ ರೂ. ಆಕ್ಸಿಜನ್ ಖರೀದಿಗೆ ದೇಣಿಗೆ ನೀಡಿ ಮಾನವೀಯತೆ ಮೆರೆದ ರೈತ

ಭೋಪಾಲ್ ಎ.27 : ಮಗಳ ಮದುವೆಗೆ ಕೂಡಿಟ್ಟಿದ್ದ 2 ಲಕ್ಷ ರೂ ಹಣವನ್ನು ರೈತರೊಬ್ಬರು ಆಕ್ಸಿಜನ್ ಖರೀದಿಗೆ ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಚಂಪಾಲಾಲ್ ಗುರ್ಜಾರ್ ಗ್ವಾಲ್ ದೇವಿಯಾನ್ ನಿವಾಸಿಯಾಗಿದ್ದು, ಇವರು ತಮ್ಮ ಮಗಳು ಸನಿಕಾಓಳ ಮದುವೆಗಾಗಿ ಒಂದಿಷ್ಟು ಹಣವನ್ನು ಹೊಂದಿಸಿದ್ದರು. ಮಗಳ ವಿವಾಹವನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದರು. ಆದರೆ ಕೊರೋನಾ ಇರುವುದರಿಂದ ಕೊನೇ ಘಳಿಗೆಯಲ್ಲಿ ಮನಸ್ಸು ಬದಲಿಸಿದ್ದಾರೆ.

ಇತ್ತ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಆಮ್ಲಜನಕದ ಕೊರತೆಯೂ ಹೆಚ್ಚಾಗಿ ಕಾಡುತ್ತಿದೆ. ಇದನ್ನು ಮನಗಂಡ ಚಂಪಾಲಾಲ್ ಅವರು ಮಗಳ ಮದುವೆಯ ಸ್ಮರಣೀಯವಾಗಿಸಲು ಮದುವೆಗೆ ಹೊಂದಿಸಿದ್ದ ಹಣವನ್ನು ಆಮ್ಲಜನಕ ಖರೀದಿಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಆಕ್ಸಿಜನ್ ಸಿಲಿಂಡರ್ ಖರಿದೀಸಲು 2ಲಕ್ಷ ರೂ. ಹಣದ ಚೆಕ್ ನ್ನು ಅಲ್ಲಿನ ಜಿಲ್ಲಾಧಿಕಾರಿ ಮಯಾಂಕ್ ಅಗ್ರವಾಲ್ ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಇದೇ ವೇಳೆ ಅವರು ಒಂದು ಆಕ್ಸಿಜನ್ ಸಿಲಿಂಡರ್ ನ್ನು ಜಿಲ್ಲಾ ಆಸ್ಪತ್ರೆಗೆ ಮತ್ತು ಇನ್ನೊಂದು ತಹಸಿಲ್ ಆಸ್ಪತ್ರೆಗೆ ನೀಡಲು ತಿಳಿಸಿದ್ದಾರೆ.

ಇದೀಗ ರೈತರ ಈ ಮಾನವೀಯ ಕಾರ್ಯವನ್ನು ಜಿಲ್ಲಾಧಿಕಾರಿ  ಶ್ಲಾಘಿಸಿದ್ದಾರೆ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

error: Content is protected !!