ಮುಂಬೈ: ಎಸ್‌ಜೆಕೆಡಬ್ಲ್ಯೂಎ ಮಾಜಿ ಅಧ್ಯಕ್ಷ ಜಾನ್ ಕ್ರಾಸ್ತ ನಿಧನ

ಮುಂಬೈ🙁 ಉಡುಪಿ ಟೈಮ್ಸ್ ಮುಂಬೈ ವರದಿ) ಕೊಂಕಣಿ ಕಲ್ಯಾಣ ಸಂಘದ ಮಾಜಿ ಅಧ್ಯಕ್ಷ ಜಾನ್ ಕ್ರಾಸ್ತಾ ಅಗ್ರಾರ್ ಅವರು ಸೋಮವಾರ ಮುಂಬೈನ ಮೀರಾ-ಭಾಯಂದರ್‌ನ ಮೆಡಿಟೆಕ್ ಆಸ್ಪತ್ರೆಯಲ್ಲಿ ಮಿದುಳಿನ ತೀವ್ರ ರಕ್ತಸ್ರಾವದಿಂದ ನಿಧನರಾದರು.

ಬಂಟ್ವಾಳದ ಆಗ್ರಾರ್ ನ ಹೋಲಿ ಸೇವಿಯರ್ ಚರ್ಚ್ ಗೆ ಸೇರಿದ ಇವರು, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಹಲವಾರು ವರ್ಷಗಳಿಂದ ಮುಂಬೈನ ಮೀರಾ ರಸ್ತೆಯಲ್ಲಿ ಶಾನ್ ಟೂರ್ಸ್ & ಟ್ರಾವೆಲ್ಸ್ ಮುನ್ನಡೆಸುತ್ತಿದ್ದರು. ಈ ಹಿಂದೆ, ಪ್ರಾಚೀನ ಕರಾವಳಿ ಕರ್ನಾಟಕದಲ್ಲಿ ಕ್ರಿಶ್ಚಿಯನ್ ಸಮುದಾಯದ ಪೂರ್ವಜರ ಜೀವನವನ್ನು ಚಿತ್ರಿಸುವ ಎರಡು ದಿನಗಳ ಕೊಂಕಣಿ ಆಹಾರ ಉತ್ಸವವು ಮೀರಾ ರಸ್ತೆಯಲ್ಲಿ ನಡೆದಾಗ, ಎಸ್‌ಜೆಕೆಡಬ್ಲ್ಯೂಎ ಹೆಸರಿನಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಇದು ಮಂಗಳೂರಿನ ಆರಂಭಿಕ ಕ್ರೈಸ್ತರ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿಶಿಷ್ಟ ವಸ್ತುಗಳ ಸಂಗ್ರಹವಾಗಿತ್ತು. ಕರಾವಳಿ ಕರ್ನಾಟಕ ಮತ್ತು ಮುಂಬೈನಾದ್ಯಂತ ಕ್ರಿಶ್ಚಿಯನ್ ಸಮುದಾಯ ವಿವಾಹ ಕಾರ್ಯಕ್ರಮಗಳ ಪ್ರವರ್ತಕರಾಗಿ, ಅವರು ಹಳೆಯ ಕ್ರಿಶ್ಚಿಯನ್ ಪರಂಪರೆಯನ್ನು ವಿವಾಹಕ್ಕೆ ಪರಿಚಯಿಸಿದರು.ಕರ್ನಾಟಕದ ಜನರ ಐಕ್ಯತೆಯನ್ನು ಉತ್ತೇಜಿಸುವ ಸಾಧನವಾಗಿ ಮೀರಾ ರಸ್ತೆಯಲ್ಲಿ ಪ್ರದರ್ಶನ ನೀಡಲು ಕೊಂಕಣಿ, ತುಳು ಮತ್ತು ಕನ್ನಡ ನಾಟಕ ತಂಡಗಳನ್ನು ಆಹ್ವಾನಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!