ಮಲ್ಪೆ: ಸ್ಮಶಾನದ ಬಳಿಯೇ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ!

ಮಲ್ಪೆ: ನೇಣು ಬಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ  ಘಟನೆ ಮಲ್ಪೆಯಲ್ಲಿ ಇಂದು ನಡೆದಿದೆ. ಸಂತೋಷ ಕುಮಾರ (46) ಆತ್ಮಹತ್ಯೆ ಮಾಡಿಕೊಂಡವರು.

ಇವರು ಮೇಸ್ತ್ರಿಯವರೊಂದಿಗೆ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದರು. ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದ ಅವರು, ಸರಿಯಾಗಿ ಕೆಲಸಕ್ಕೆ  ಹೋಗದೆ  ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು.

ಮಾ. 29 ರಂದು ಯಾವುದೋ  ಕಾರಣದಿಂದ ಜೀವನದಲ್ಲಿ ಮನನೊಂದ ಅವರು ಗುಜ್ಜರಬೆಟ್ಟುವಿನ ಸ್ಮಶಾನಕ್ಕೆ ಹೋಗುವ ದಾರಿಯ ಬದಿಯಲ್ಲಿನ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!