ಹೆದ್ದಾರಿಯಲ್ಲಿ ಸಿಕ್ಕ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿದ ರಿಕ್ಷಾ ಚಾಲಕ

ಉಡುಪಿ: ಕಟಪಾಡಿ ಹೈವೆಯಲ್ಲಿ ಇಂದು ಸಿಕ್ಕಂತಹ ಬ್ಯಾಗ್‍ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ರಿಕ್ಷಾ ಚಾಲಕ ಭಾಸ್ಕರ ಅವರಿಗೆ ಹೈವೆಯಲ್ಲಿ ಈ ಬ್ಯಾಗ್ ಸಿಕ್ಕಿದ್ದು, ಅದರಲ್ಲಿ 25,000 ನಗದು ಇದ್ದಂತಹ 3 ಪರ್ಸ್, 2 ಮೊಬೈಲ್, 2 ಎಟಿಎಂ ಕಾರ್ಡ್ ಹಾಗೂ ಇತರ ವಸ್ತುಗಳು ಇದ್ದವು.

ಬ್ಯಾಗ್ ಸಿಕ್ಕ ತಕ್ಷಣ ಭಾಸ್ಕರ ಅವರು ಅದನ್ನು ಕಟಪಾಡಿ ಪೊಲೀಸ್ ಹೊರ ಠಾಣಿಗೆ ನೀಡಿದ್ದರು. ಬಳಿಕ ಬ್ಯಾಗ್‍ನ ವಾರಸುದಾರರನ್ನು ಪತ್ತೆ ಹಚ್ಚಿದ ಪೊಲೀಸರು, ಬ್ಯಾಗ್ ನ್ನು ಕಳೆದುಕೊಂಡಿದ್ದ ರಾಘವೇಂದ್ರ ರಾವ್ ಅವರಿಗೆ ಹಸ್ತಾಂತರಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!