ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿನ ಗೊಂದಲ: ರಕ್ಷಾ ರಾಮಯ್ಯ ವರಿಷ್ಟರ ಮೊರೆ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸುವ ಕುರಿತಂತೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ವರಿಷ್ಟರ ಮೊರೆ ಹೋಗಿದ್ದಾರೆ. ಈ ಕುರಿತಂತೆ ಗೊಂದಲ ನಿವಾರಣೆಗೆ ದೆಹಲಿಗೆ ತೆರಳಿದ್ದಾರೆ

ಫೆ.10 ರಂದು ಸಂಸತ್ ಘೇರಾವ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆ ಸುಮಾರು ಐದರಿಂದ ಆರು ಸಾವಿರ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ದೆಹಲಿಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬೆಂಬಲಿಗರ ಒತ್ತಾಸೆಯಂತೆ ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಉಂಟಾಗಿರುವ ಗೊಂದಲ ಮತ್ತು ಅಸಮಾಧಾನ ಬಗೆಹರಿಸುವಂತೆ ರಕ್ಷಾ ರಾಮಯ್ಯ ವರಿಷ್ಠರಿಗೆ ಮನವಿ ಮಾಡಲಿದ್ದಾರೆ. 

ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿ ಗೆದ್ದ 120 ಕ್ಕೂ ಹೆಚ್ಚು ಮಂದಿ ಬಳಿಕ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಿತಗೊಂಡಿರುವವರು ತಮಗೆ ನ್ಯಾಯಕೊಡಿಸುವಂತೆ ರಕ್ಷಾ ರಾಮಯ್ಯ ಅವರ ಬಳಿ ಒತ್ತಡ ಹೇರಿದ್ದಾರೆ. ಆದ್ದರಿಂದ  ರಕ್ಷಾ ರಾಮಯ್ಯ ಅವರು ಮೂರು ದಿನಗಳ ಕಾಲ ದೆಹಲಿಯಲ್ಲಿದ್ದು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!