ಉಡುಪಿ: ರಾಷ್ಟ್ರಮಟ್ಟದ ಅಥ್ಲೆಟಿಕ್‌ಗೆ ಆಯ್ಕೆಗೊಂಡ ವಿದ್ಯಾರ್ಥಿನಿ‌ಗೆ 40 ಸಾವಿರ ರೂ. ನೀಡಿದ ಎನ್ಎಸ್ ಯುಐ

ಉಡುಪಿ: ಅಸ್ಸಾಂನಲ್ಲಿ ನಡೆಯಲಿರುವ ನ್ಯಾಷನಲ್ ಲೆವೆಲ್ ಅಥ್ಲೆಟಿಕ್‌ಗೆ ಆಯ್ಕೆಗೊಂಡಿರುವ (100 ಮೀ. ಓಟ) ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ ವಿದ್ಯಾರ್ಥಿನಿ ಕುಮಾರಿ ಶ್ರದ್ಧಾ ಕುಂದರ್ ಅವರಿಗೆ ಸ್ಪರ್ಧಾ ಸ್ಥಳವಾದ ಅಸ್ಸಾಂಗೆ ತೆರಳಲು ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ನೇತೃತ್ವದಲ್ಲಿ ಸಂಗ್ರಹಿಸಿದ ರೂ. 40 ಸಾವಿರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಕರಿಸಿದ ಕೃಷ್ಣಮೂರ್ತಿ ಆಚಾರ್ಯ ಹಾಗೂ ಇತರ ಕಾಂಗ್ರೆಸ್ ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಎನ್.ಎಸ್.ಯು.ಐ. ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್, ಹರಿಶ್ಚಂದ್ರ ಕೊಡವೂರು, ಎನ್.ಎಸ್.ಯು.ಐ. ನ ರೆಯಾನ್ಸ್, ತಿಲಕ್, ಕಾರ್ತಿಕ್, ಕೋಚ್ ಕಿಶೋರ್ ಕುಮಾರ್, ರವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!