ಅನ್ನ ಭಾಗ್ಯ ಅಕ್ಕಿ 5ಕೆ.ಜಿಗೆ ಇಳಿಕೆ: ಸಿದ್ದರಾಮಯ್ಯ ಅಸಮಾಧಾನ

ಮೈಸೂರು: ಅನ್ನ ಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು 7 ಕೆಜಿ ಯಿಂದ 5 ಕೆ.ಜಿಗೆ ಇಳಿಸಿರುವ ಕುರಿತು ಪ್ರಸ್ತಾಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಅಕ್ಕಿಯೇನು ಇವರಪ್ಪನ ಮನೆಯಿಂದ ತಂದು ಕೊಡ್ತಿದ್ರಾ? ಎಂದು ಪ್ರಶ್ನಿಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನಾನು ಸಿಎಂ ಆಗಿದ್ದ ವೇಳೆಯಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದನು 7 ಕೆ.ಜಿ ಅಕ್ಕಿಯನ್ನು ಈಗ 5 ಕೆ.ಜಿಗೆ ಇಳಿಸಿದ್ದಾರೆ, ಇವರಪ್ಪನ ಮನೆಯಿಂದ ತಂದು ಅಕ್ಕಿ ಕೊಡ್ತಿದ್ರಾ? ಎಂದಿದ್ದಾರೆ. ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಕೂಡ ಕಿಡಿಕಾರಿದ ಅವರು, ಜನತೆ ಉದ್ಯೋಗವನ್ನು ಕೇಳಿದ್ರೆ, ಪಕೋಡ ಮಾರಿ ಅಂತ ಹೇಳುತ್ತಾರೆ, ಈ ಕಾರಣಕ್ಕ ಅವರು ಪ್ರಧಾನಿಯಾಗಿರೋದು ಎಂದು ಪ್ರಶ್ನಿಸಿದರು.

ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ರೈತರ ಪ್ರತಿಭಟನೆ ಬಗ್ಗೆ ಖುದ್ದು ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದರು ಕೂಡ ಅವರು ಬುದ್ದಿ ಕಲಿತಿಲ್ಲ, ರೈತರು ಪ್ರತಿಭಟನೆಯನ್ನು ನಡೆಸಲು ಶುರು ಮಾಡಿ 48 ದಿನಗಳು ಕಳೆಯುತ್ತ ಬಂದರೂ ಕೂಡ ಪ್ರಧಾನಿ ಅವರನ್ನು ಮಾತನಾಡಿಸುವ ಗೋಜಿಗೆ ಹೋಗಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!