ಗಣರಾಜ್ಯೋತ್ಸ 2021 – ಪರೇಡ್ ಕಾರ್ಯಕ್ರಮಕ್ಕೂ ಕೊರೊನಾ ಅಡ್ಡಿ

ನವದೆಹಲಿ: ದೇಶಾದ್ಯಂತ 2020 ಕೊರೋನಾ ಆತಂಕ ದಲ್ಲಿಯೇ ಕಳೆದು ಹೋಯ್ತು ಇದರೊಂದಿಗೆ ಹೊಸ‌ ವರುಷ‌ದ  ಆಚರಣೆಗೆ ಕೊರೋನಾ ಹೊಡೆತದ ಬೆನ್ನಲ್ಲೇ  ಇದೀಗ ಈ ಭಾರಿಯ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮಕ್ಕೂ ಕೊರೊನಾ ಅಡ್ಡಿಯಾಗಿದೆ. 
ಪ್ರತಿ ವರ್ಷ ದೆಹಲಿಯ ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ  ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಪ್ರತಿ ಬಾರಿ ವಿಜಯ್ ಚೌಕದಿಂದ ಆರಂಭವಾಗಿ ಕೆಂಪುಕೋಟೆಯವರೆಗೂ ನಡೆಯುತ್ತಿದ್ದ ಪರೇಡ್,  ಈ ಬಾರಿ ನ್ಯಾಷನಲ್ ಸ್ಟೇಡಿಯಂವರೆಗೂ ಮಾತ್ರ ನಡೆಯಲಿದೆ. ಪ್ರತಿ ವರ್ಷ 8.2 ಕಿಮೀವರೆಗೂ ಸಾಗುತ್ತಿದ್ದ ಪರೇಡ್ ಈ ಬಾರಿ 3.3 ಕಿಮೀವರೆಗೆ ಮಾತ್ರ  ಸಾಗಲಿದೆ‌ ಎಂದು ತಿಳಿದು ಬಂದಿದೆ.

ಈ ಹಿಂದೆಲ್ಲಾ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜಪಥದಲ್ಲಿ ಲಕ್ಷಾಂತರ ಮಂದಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕೊರೊನಾ ನಿಯಂತ್ರಿಸುವ ಸಲುವಾಗಿ ಈ ಬಾರಿ ಕೇವಲ 25,000 ಜನರಿಗೆ ಮಾತ್ರ ರೇಡ್ ವೀಕ್ಷಣೆಗೆ ಆಸನ ವ್ಯವಸ್ಥೆ ಮಾಡಲಾಗಿದೆ.  ಇದರ ಜೊತೆಗೆ 15 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇನ್ನು ದೈಹಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪರೇಡ್ ನಡೆಸುವ ತಂಡದಲ್ಲಿರುತ್ತಿದ್ದ 144 ಜನರನ್ನು ಇದೀಗ 96ಕ್ಕೆ ಕಡಿತಗೊಳಿಸಲಾಗಿದ್ದು, ಸಾಂಸ್ಕøತಿಕ ಕಾರ್ಯಕ್ರಗಳನ್ನು ಕೂಡ ಕಡಿಮೆ ಮಾಡಲಾಗಿದೆ.  ಇನ್ನೂ ಪರೇಡ್ ನಡೆಸುವ ಎಲ್ಲಾ ತಂಡಗಳು ಕೂಡಾ  ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅಧಿಕಾರಿಗಳು ತಿಳಿಸಿರೋದಾಗಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!