ಒಂದು ದೇಶ ಒಂದು ಚುನಾವಣೆ ರಾಷ್ಟ್ರದ ಹಿತಕ್ಕಾಗಿಯೊ?ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ…?

ಒಂದು ರಾಷ್ಟ್ರ ಒಂದು ಚುನಾವಣೆಯ ವರದಿಯನ್ನು ಮಾಜಿ ರಾಷ್ಟ್ರಪತಿ ಕೇೂವಿಂದರವರ ಸಮಿತಿ ರಾಷ್ಟ್ರಪತಿಗಳಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದೇ ಬಿಂಬಿಸುವ ಪ್ರಯತ್ನ ನಡೆದಿದೆ. ಆದರೆ ಈ ಸುಧಾರಣೆಯ ಹೆಜ್ಜೆಯಲ್ಲಿ ಹತ್ತು ಹಲವು ತೊಡಕುಗಳನ್ನು ಕೂಡಾ ಗಮನಿಸಲಾಗಿದೆ.

ಈ ಸವಾಲುಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಕೊಟ್ಟ ಪರಿಹಾರಗಳೆಲ್ಲವೂ ರಾಜಕೀಯ ಪಕ್ಷಗಳ ಆಸಕ್ತಿಗೆ ಪೂರಕವಾಗಿದೆ ಬಿಟ್ಟರೆ ಜನರ ಆಶಯಗಳಿಗೆ ಸ್ವಲ್ಪವೂ ಸ್ಪಂದಿಸಿಲ್ಲ ಅನ್ನುವುದು ಸ್ವಷ್ಟವಾಗಿ ಕಾಣುತ್ತದೆ.

ಉದಾ: ಯಾವುದೇ ಒಂದು ಸರ್ಕಾರ ಎರಡು ವರುಷ ಆಡಳಿತ ನಡೆಸಿ ಬಿದ್ದು ಹೇೂದರೆ ಉಳಿದ ಮೂರು ವರುಷಗಳಿಗೆ ಚುನಾವಣೆ ನಡೆಸಬೇಕಂತೆ. ಅಂದರೆ ಈಮಧ್ಯಾವಧಿ ಚುನಾವಣೆ ನಡೆಸುವುದು ಯಾರ ಖಚಿ೯ನಲ್ಲಿ ನಮ್ಮ ಖಚಿ೯ನಲ್ಲಿ ತಾನೇ? ಹಾಗಾದರೆ ಮತ್ತೆ ಯಾಕೆ ಒಂದು ರಾಷ್ಟ್ರ ಒಂದು ಚುನಾವಣೆಯ ಉಸುಬಾರಿ. ಮಾತ್ರವಲ್ಲ ಇಲ್ಲಿ ನಾವು ಗಂಭೀರವಾಗಿ ಗಮನಿಸಬೇಕಾದ ಪ್ರಮುಖ ಸಂಗತಿ ಅಂದರೆ, ಈ ಎರಡೇ ವರುಷಗಳಲ್ಲಿ ಈ ಚುನಾಯಿತ ಸರಕಾರ ಬಿದ್ದು ಹೇೂಗಲು ಕಾರಣ ಯಾರು? ಇದೇ ರಾಜಕಾರಣಿಗಳು ತಾನೇ. ಅವರ ಅಧಿಕಾರದ ದಾಹ ತೀರಿಸಿಕೊಳ್ಳುವುದಕೇುಾಸ್ಕರ ಶಾಸಕರನ್ನುಕದಿಯುವುದು ಆಮಿಷ ಒಡ್ಡುವುದು. ಇದರಿಂದಾಗಿ ಸರ್ಕಾರ ಉರುಳಿ ಮತ್ತೆ ಮಧ್ಯದಲ್ಲಿ ಚುನಾವಣೆ. ಹಾಗಾದರೆ ಒಂದು ರಾಷ್ಟ್ರ ಒಂದು ಚುನಾವಣೆ ವರದಿಯಲ್ಲಿ ಇದಕ್ಕೇನಾದರೂ ಪರಿಹಾರವಿದೆಯಾ ಖಂಡಿತವಾಗಿಯೂ ಇಲ್ಲ. ಇನ್ನೂ ಕೇಳಿ ಒಬ್ಬ ಶಾಸಕನಾಗಿ ಚುನಾಯಿತನಾಗಿದ್ದಾನೆ. ಅವನಿಗೆ ಮತ್ತೆ ಲೇೂಕಸಭಾ ಚುನಾವಣೆಯಲ್ಲಿ ಸ್ಪಧಿ೯ಸಲು ಅವಕಾಶ. ಹಾಗಾದರೆ ಇಲ್ಲಿ ಖಾಲಿ ಬಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲು ಯಾರು ಖಚ೯ ಮಾಡ ಬೇಕು.? ಸರ್ಕಾರ ಅಂದ್ರೆ ಜನರೇ ತಾನೇ? ಈ ಸಮಸ್ಯೆಗೇನಾದರೂ ಪರಿಹಾರ ಉಂಟಾ ಇದು ಇಲ್ಲ.

ಒಬ್ಬ ಅಭ್ಯರ್ಥಿಗೆ ಒಂದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪಧೆ೯ ಮಾಡಲು ಅವಕಾಶ ಮಾಡಿಕೊಡ ಬೇಕು. ಇದಕ್ಕೆ ಇಲ್ಲಿ ಯಾವುದೇ ಉತ್ತರವಿಲ್ಲ. ಯಾಕೆಂದರೆ ಇದರಿಂದಾಗಿ ಅವರಿಗೆ ತೊಂದರೆ. ಇಂತಹ ಹಲವಾರು ಸಮಸ್ಯೆಗಳಿಗೆ ಜನರನ್ನೆ ಬಲಿಪಶುಗಳಾಗಿ ಮಾಡಿ ರಾಜಕೀಯ ಪಕ್ಷದವರು ಅನುಭೇೂಗಿಸುವ ಸೌಕರ್ಯಗಳನ್ನು ಚುನಾವಣೆಯ ಕ್ರಾಂತಿಕಾರಿ ಸುಧಾರಣೆ ಅನ್ನುವುದು ಯಾವ ಬಯಲು ಸೀಮೆ ನ್ಯಾಯ.?

ಈ ವರದಿ ತಯಾರಿಕೆಯಲ್ಲಿ ನಮ್ಮಮಾಜಿ ರಾಷ್ಟ್ರಪತಿ ಕೇೂವಿಂದರ ತಂಡ ಹಲವು ದೇಶಗಳಿಗೆಸುತ್ತಿದ್ದಾವೆ ಅಂತೆ. ಅವರು ಯಾವ ದೇಶವನ್ನು ಸುತ್ತಬೇಕಿತ್ತೊ ಅಲ್ಲಿಗೆ ಹೇೂಗಲೇ ಇಲ್ಲ. ನಮ್ಮ ದೇಶದಂತೆ ಸಂಸದೀಯ ಪ್ರಜಾಸತ್ತಾತ್ಮಕ ಸರ್ಕಾರವಿರುವ ಬಹುತ್ವಾದ ರಾಜಕೀಯ ಆಥಿ೯ಕ ಸಂಸ್ಕೃತಿ ಭಾಷೆ ಭೌಗೋಳಿಕತೆ ಇರುವ ದೇಶಗಳಲ್ಲಿ ಈ ವಿಷಯದ ಕುರಿತಾಗಿ ಅಧ್ಯಯನ ನಡೆಸಿದ್ದರೆ ಆ ಅಧ್ಯಯನಕ್ಕೊಂದು ಅಥ೯ ಬರುತ್ತಿತ್ತು.

ಉದಾ: ಜಪಾನ್‌ನಲ್ಲಿ ನಮ್ಮ ಹಾಗೆ ಸಂಸದೀಯ ಸರ್ಕಾರ ಬಹುಪಕ್ಷೀಯ ಪದ್ದತಿ. ಹಲವು ವರುಷಗಳ ಕಾಲ ಸಮಿಶ್ರ ಸರ್ಕಾರ, ಅತಂತ್ರ ಸರಕಾರ, ಪಕ್ಷಾಂತರ ಸಮಸ್ಯೆ. ಈ ಎಲ್ಲಾ ಸವಾಲುಗಳನ್ನು ಅನುಭವಿಸಿದ ಜಪಾನ್ ಸರ್ಕಾರ. ಇದಕ್ಕಾಗಿಯೇ ಅವರು ಕಂಡುಕೊಂಡ ಸುದೃಢ ಸರ್ಕಾರಕ್ಕೆ ಪರಿಹಾರವೆಂದರೆ, ಹೊಸ ಜಪಾನ್ ಮೊಡೆಲ್. ಅಲ್ಲಿನ ಪ್ರಧಾನಿಯನ್ನು ಸಂಸತ್ತಿನ ಒಳಗೇನೆ ಚುನಾಯಿಸಲ್ಪಡುತ್ತಾರೆ. ನಮ್ಮಲ್ಲಿ ಪ್ರಧಾನಿ/ಮುಖ್ಯ ಮಂತ್ರಿಗಳು ಸದನದ ಹೊರಗಡೆ ಚುನಾಯಿತರಾಗಿ ಒಳಗೆ ಬಂದು ವಿಶ್ವಾಸವೊ? ಅವಿಶ್ವಾಸವೊ ತೇೂರಿಸಬೇಕು. ಒಂದು ವೇಳೆ ಸದನದ ಒಳಗೆ ಚುನಾಯಿತ ಪ್ರಧಾನಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಬೇಕಾದರೆ ಮೆಾದಲು ಇನ್ನೊಬ್ಬ ಪ್ರಧಾನಿಯನ್ನು ಆಯ್ಕೆ ಮಾಡಿ ಮೊದಲಿನ ಸರ್ಕಾರದ ಮುಖ್ಯಸ್ಥನನ್ನು ಮನೆಗೆ ಕಳಹಿಸಬೇಕು. ನಮ್ಮಲ್ಲಿ ಹಾಗೆ ಅಲ್ಲ.ಮೆಾದಲು ಅವಿಶ್ವಾಸ ಮಂಡಿಸಿ.ಮನೆಗೆ ಕಳುಹಿಸಿ ಮತ್ತೆ ಹೊಸಬ್ಬರನ್ನು ಹುಡುಕುವುದು. ಹುಡುಕುವಾಗ ಕುದುರೆ ವ್ಯಾಪಾರ ರೆಸಾರ್ಟ್ ಉಪಚಾರ. ಎಲ್ಲವೂ ನಡೆದುಹೇೂಗುತ್ತದೆ. ಇಂತಹ ಯಾವುದೇ ಗಂಡಾಂತರಕಾರಿ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ “ಒಂದು ದೇಶ ಒಂದು ಚುನಾವಣೆ” ಕ್ರಾಂತಿಕಾರಿ ಬದಲಾವಣೆ ಸುಧಾರಣೆ ಅನ್ನುವುದು ಬರೇ ಭ್ರಾಂತಿಕಾರಿ ಹೆಜ್ಜೆ ಬಿಟ್ಟರೆ ಕ್ರಾಂತಿಕಾರಿ ಖಂಡಿತವಾಗಿಯೂ ಅಲ್ಲ.

ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Leave a Reply

Your email address will not be published. Required fields are marked *

error: Content is protected !!